
ಕಥೊಲಿಕ್ ಸಭಾ ಕೊಳಲಗಿರಿ ಘಟಕವು ಇಂದು ಬೆಳಿಗ್ಗೆ 10:00 ಗಂಟೆಗೆ ಭಾಷಣ ಸ್ಪರ್ಧೆಯನ್ನು ನಡೆಸಿತು. ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಜೋಸೆಫ್ ಮಚಾದೊ ಮತ್ತು ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಅಶ್ವಿನ್ ರೋಚ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ರಹ್ಮಾವರದ ಶ್ರೀ ಜೊಯೆಲ್ ಡಿ’ಆಲ್ಮೇಡಾ, ಮಿಲಾಗ್ರಿಸ್ ಕ್ಯಾಥೆಡ್ರಲ್ನ ಶ್ರೀಮತಿ ಐರಿನ್ ಮಿನೇಜಸ್ ಮತ್ತು ಶ್ರೀಮತಿ ಮೈನಾ ಲುವಿಸ್, ಪೇತ್ರಿಯ ಶ್ರೀ ರಾಜ್ ರೋಶನ್ ಡಿಸೋಜಾ, ಮೌಂಟ್ ರೊಸರಿಯ ಶ್ರೀಮತಿ ರೋಸಿ ಕ್ವಾಡ್ರಸ್ ಮತ್ತು ತೊಟ್ಟಾಂನ ಶ್ರೀಮತಿ ಶಾಂತಿ ಪಿಕಾರ್ಡೊ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಈ ಕಾರ್ಯಕ್ರಮದಲ್ಲಿ 57 ಮಕ್ಕಳು ಭಾಗವಹಿಸಿದ್ದರು. ಎಲ್ಲಾ ಸ್ಪರ್ಧಿಗಳಿಗೆ ಉಡುಗೊರೆಗಳನ್ನು ನೀಡಲಾಯಿತು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀ ರೋಶನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಕ್ವೀನಿ ಮೇರಿ ಡಿಸೋಜಾ ಸ್ವಾಗತ ಮಾಡಿದರು ಮತ್ತು ಶ್ರೀ ಡಾನ್ ಮೆಂಡೋನ್ಸಾ ವಂದನಾರ್ಪಣೆ ಮಾಡಿದರು.



















Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now