ಗೋಕುಲ ಶತಮಾನೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

ಗೋಕುಲ ಶತಮಾನೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

0Shares

ಗೋಕುಲ ಶತಮಾನೋತ್ಸವ ಆಚರಣೆ ಸಾಂಸ್ಕೃತಿಕ ಕಾರ್ಯಕ್ರಮ
ಸಂಗೀತ ಪ್ರೇಮಿಗಳನ್ನು ಮಂತ್ರ ಮುಗ್ಧಗೊಳಿಸಿದ ವಾಯಲಿನ್ ವಾದಕಿ ಬಾಲ ಪ್ರತಿಭೆ ಗಂಗಾ ಶಶಿಧರನ್

ಮುಂಬಯಿ (ಆರ್‌ಬಿಐ), ಫೆ.26: ಶತಮಾನೋತ್ಸವ ಆಚರಣೆಯ ಅಂಗವಾಗಿ ವರ್ಷವಿಡೀ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ, ಸಾಯನ್, ಫೆ.22ರ ಶನಿವಾರ ಚೆಂಬೂರು ಫೈನ್ ಆರ್ಟ್ಸ್ ಸಭಾಗೃಹದಲ್ಲಿ ಗುರುವಾಯೂರ್ ನ ಹನ್ನೊಂದು ವರ್ಷದ ಬಾಲ ಪ್ರತಿಭೆ ವಾಯಲಿನ್ ಮಾಂತ್ರಿಕೆ ಕುಮಾರಿ ಗಂಗಾ ಶಶಿಧರನ್ ಅವರ ವಾಯಲಿನ್ ವಾದನ ಕಚೇರಿಯನ್ನು ಆಯೋಜಿಸಿತ್ತು.

ವಾತಾಪಿ ಗಣಪತಿಮ್ ಭಜೇ, ಎಂದುರೋ ಮಹಾನುಭಾವುಲು, ಕೃಷ್ಣಾ ನೀ ಬೇಗನೆ ಬಾರೋ, ನಗುಮೋಮು, ಶಂಕರಾಭರಣಂ, ಮಾಮವ ಮಾಧವ ಕೃಷ್ಣಾ, ಭಾಗ್ಯದ ಲಕ್ಷ್ಮಿ ಬಾರಮ್ಮ ಹರಿವರಾಸರಂ ಮುಂತಾದ ಪ್ರಸಿದ್ಧ ಕೀರ್ತನಕಾರರ, ಹರಿದಾಸರ ಕೀರ್ತನೆಗಳನ್ನು ನುರಿತ ಕಲಾವಿದರಂತೆ ಅತ್ಯದ್ಭುತವಾಗಿ ಲೀಲಾಜಾಲವಾಗಿ ವಾಯಲಿನ್ ನಲ್ಲಿ ನುಡಿಸುತ್ತಾ, ಪಕ್ಕ ವಾದ್ಯದವರ ವಾದನಗಳನ್ನು ಮೆಚ್ಚುತ್ತಾ, ತನ್ನ ಕೈ ಚಳಕದಿಂದ, ಹಸನ್ಮುಖ ಭಾವದಿಂದ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿದ ಗಂಗಾ, ತುಂಬಿದ ಸಭಾಗೃಹದಲ್ಲಿ ನೆರೆದವರಿಂದ ಪ್ರಚಂಡ ಕರತಾಡನದ ಮೆಚ್ಚುಗೆ ಗಳಿಸಿದರು. ಅವರ ವಾಯಲಿನ್ ವಾದನಕ್ಕೆ ತಕ್ಕಂತೆ ಪಕ್ಕ ವಾದ್ಯದಲ್ಲಿ ಮೃದಂಗದಲ್ಲಿ ರೋಹಿತ್ ಪ್ರಸಾದ್, ತಾವಿಲ್ ವಾದಕರಾಗಿ ಶ್ರೀಕುಮಾರ್ ಸಿ. ಎಚ್, ಘಟಂ ವಾದಕರಾಗಿ ಮಂಜೂರ್ ಉನ್ನಿಕೃಷ್ಣನ್, ರಿದಮ್ ಪ್ಯಾಡ್ ನಲ್ಲಿ ವೈಕೋಮ್ ವಿಜಯಕುಮಾರ್ ಮತ್ತು ಕೀ ಬೋರ್ಡ್ ವಾದಕರಾಗಿ ಚೇರ್ತಲ ಸುನಿಲ್ ಲಾಲ್ ರವರು ಅತ್ಯುತ್ತಮವಾಗಿ ಸಹಕರಿಸಿದರು.

ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಅಧ್ಯಕ್ಷ ಡಾ. ಸುರೇಶ್ ಎಸ್ ರಾವ್ ಮತ್ತು ಪದಾಧಿಕಾರಿಗಳು ಕುಮಾರಿ ಗಂಗಾ ಶಶಿಧರನ್ ಮತ್ತು ಪಕ್ಕ ವಾದ್ಯ ಕಲಾವಿದರನ್ನು ಶಾಲು, ಪುಷ್ಪಗುಚ್ಛ ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು. ದೀತ್ಯಾ ಶಿವತ್ತಾಯ ಕಲಾವಿದರನ್ನು ಪರಿಚಯಿಸಿದರು. ವಿನೋದಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು. ಗೌ. ಕಾರ್ಯದರ್ಶಿ ಎ.ಪಿ.ಕೆ. ಪೋತಿ ಧನ್ಯವಾದ ಸಮರ್ಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now