ಯುವ ವಿಚಾರ ವೇದಿಕೆ (ರಿ) ಕೊಳಲಗಿರಿ- ಆಟಿಡೊಂಜಿ ದಿನ

ಯುವ ವಿಚಾರ ವೇದಿಕೆ (ರಿ) ಕೊಳಲಗಿರಿ- ಆಟಿಡೊಂಜಿ ದಿನ
0Shares

ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವವಿಚಾರ ವೇದಿಕೆ (ರಿ) ಕೊಳಲಗಿರಿ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು. ಹಿರಿಯರಾದ ಗಿರಿಜಾ ಆಚಾರ್ಯ ನರ್ನಾಡು, ಚಿನ್ನು ಕೊಳಲಗಿರಿ ಇವರು ಸಿದ್ದೆಯಿಂದ ಸೇರಿಗೆ, ಸೇರಿನಿಂದ ಕಳೆಸೆಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಮೇಶ ಕರ್ಕೇರ, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ, ಹಿರಿಯರಾದ ಮಾಧವ ಪಾಣ, ಶಕುಂತಲಾ ಸುಕೇಶ್ ಉಪಸ್ಥಿತರಿದ್ದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು. ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ರವೀಂದ್ರ ಕುಮಾರ್, ಸುಕೇಶ್ ಪಾಣ, ಕೇಶವ್ ಪುಷ್ಪಲತಾ ನರ್ಸರಿ, ಶಿವಾನಂದ , ಶಶಿಕುಮಾರ್, ಹೇಮಂತ್, ವೈಭವ್, ಅವಿನಾಶ್, ಶಾಂತ ಸೆಲ್ವರಾಜ್, ಶೋಭಾ ಯೋಗೀಶ್, ಜಯಲಕ್ಷ್ಮೀ, ಸುಜಾತ ಟೀಚರ್, ಲಕ್ಷ್ಮೀ ಟೀಚರ್ , ಸೌಮ್ಯ ಶೆಟ್ಟಿ, ಪ್ರಿಯಾಂಕಾ ಉಪಸ್ಥಿತರಿದ್ದರು. ಸುಬ್ರಮಣ್ಯ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ರಷ್ಷು ವಿವಿಧ ಬಗೆಯ ಖಾದ್ಯಗಳನ್ನು ವೇದಿಕೆಯ ಸದಸ್ಯರು ತಯಾರಿಸಿ ತಂದಿದ್ದರು. ಕೃಷಿ ಪರಿಕರಗಳ ಜೊತೆಗೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವು ವಸ್ತುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now