ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 25

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 25

0Shares

ದುಷ್ಟ ರಿಂದ ದೂರ ಇದ್ದು ಬಿಡು*


ಸಣ್ಣಕಥೆ: ಡಾ.ಶಶಿಕಿರಣ್ ಶೆಟ್ಟಿ

*ಬಸ್ ನಲ್ಲಿ ಆತ ಹೋಗುತಿದ್ದ,ಆತನ ಕೂದಲು ಕೆದರಿತ್ತು,ಕಿವಿಯಲ್ಲಿ ಹೆಡ್ ಫೋನ್ ಸಿಕ್ಕಿಸಿದ್ದ,ಜೀನ್ಸ್ ಪ್ಯಾಂಟ್ ಟಿ ಶರ್ಟ್ ಒಟ್ಟಾರೆ ಪೋಲಿ ತರ ಕಾಣಿಸುತಿದ್ದ ಕಿವಿಯಲ್ಲಿ ಕೇಳುತಿದ್ದ ಹಾಡು ಬಾಯಲ್ಲಿ ಹೇಳುತಿದ್ದ …ಅಪ್ಪ ಲೂಸ….ಅಮ್ಮ ಲೂಸ…..

ಸ್ವಲ್ಪ ಮುಂದೆ ಇನ್ನೊಬ್ಬ ಅದೇ ಬಸ್ ಹತ್ತಿದ ಅವನ ಪಕ್ಕದ ಸೀಟ್ ಅಲ್ಲಿ ಕೂತ ,ನೋಡಲು ತದ್ವಿರುದ್ದ ಕೂದಲು ನೀಟ್ ಆಗಿ ಬಾಚಿದ್ದ ಫುಲ್ ಕೈ ಶರ್ಟ್ ಹಾಕಿ ,ಫಾರ್ಮಲ್ ಪ್ಯಾಂಟ್ ,ಸಭ್ಯರ ಚಪ್ಪಲ್ ಬಾಯಲ್ಲಿ ದೇವರ ಪದ ಒಟ್ಟಲ್ಲಿ ಸಭ್ಯ ವ್ಯಕ್ತಿ ಯಂತೆ ತೋರುತಿದ್ದ ..

ಅವರೆದುರು ಚೆಂದದ ಕಾಲೇಜುಹುಡುಗಿ ಯೊಬ್ಬಳು ನಿಂತಿದ್ದಳು .ಯಾರೋ ಅವಳ ಮುಟ್ಟ ಬಾರದ ಸ್ಥಳವ ಮುಟ್ಟಿ ವಿಸಿಲ್ ಹೊಡೆದಿದ್ದರು😡.ಆಕೆ ತಿರುಗಿ ಕಣ್ಣು ದೊಡ್ಡದು ಮಾಡುತ್ತಾಳೆ ಅಲ್ಲೇ ಇದ್ದ ಪೋಲಿ ಹುಡುಗನ್ನ ನೋಡಿ.

ಇಡೀ ಬಸ್ಸಿ ನಲ್ಲಿದ್ದ ಜನರು ಅವನನ್ನು ಕೆಕ್ಕರಿಸಿ ನೋಡುತ್ತಾರೆ,ಎಲ್ಲರ ದೃಷ್ಟಿಯಲ್ಲೂ ವಿಲನ್ ಆಗಿದ್ದ ಈತ ..ಆದರೆ ಆತ ಮಾತ್ರ ತನ್ನ ಬಳಿ ಸಭ್ಯನಂತೆ ಕೂತಿರುವ ವ್ಯಕ್ತಿಯನ್ನು ಆಶ್ಚರ್ಯ ದಿಂದ ನೋಡುತಿರುತ್ತಾನೆ ಇದಾವುದರ ಪರಿವೇ ಇಲ್ಲದವನಂತೆ ಆತ ದೇವರ ನಾಮ ಜಪ ಮಾಡುತಿದ್ದ…

*ತಕ್ಷಣ ಪೋಲಿ ಆ ಸೀಟು ಬಿಟ್ಟು ಬಸ್ಸಿನ ಮೂಲೆಯ ಬೇರೊಂದು ಸೀಟಲ್ಲಿ ಹೋಗಿ ಕೂರುತ್ತಾನೆ .ಯಾಕಂದರೆ ಈ ಪೋಲಿಗೆ ಸ್ಪಷ್ಟ ವಾಗಿ ಗೊತ್ತಿತ್ತು ಆ ಹುಡುಗಿ ಗೆ ಕೀಟಲೆ ಕೊಟ್ಟವ ತಾನಲ್ಲ ,ಇದೇ ಸಭ್ಯ ವ್ಯಕ್ತಿ ಎಂದು…ಆದರೆ ಇವನ ಬಳಿ,ಪ್ರತ್ಯಕ್ಷ ನೋಡಿದ ಇವನ ಕಣ್ಣು ಬಿಟ್ಟರೆ ಯಾವ ಸಾಕ್ಷಿಯೂ ಇರಲಿಲ್ಲ ಆಮೇಕೆ ತಾನು ತಿಂದು ಕುರಿಯ ಮುಖಕ್ಕೇ ಒರೆಸಿ ಹೋಗಿಯಾಗಿತ್ತು ….

ಇಲ್ಲಿ ನಾವು ಕಲಿಯ ಬೇಕಾದ್ದು 2 ಪಾಠ ಮೊದಲನೆಯದ್ದು ವೇದಾಂತ ಬಾಯಲ್ಲಿ ಹೇಳುವ ಎಲ್ಲಾ ಜನರೂ ಸಜ್ಜನರಾಗಿರುವುದಿಲ್ಲ…ಯಾಕೆಂದರೆ ನೆನಪಿಡಿ ಭೂತವೂ ಭಗವದ್ಗೀತೆ ಓದಬಹುದು.ಹಾಗಾಗಿ ಮುಖನೋಡಿ ಯಾರನ್ನು ಅಳೆಯಬೇಡಿ

ಎರಡನೆಯದು ಅದೆಷ್ಟೋ ಬಾರಿ ನಮ್ಮಸುತ್ತಮುತ್ತ ನಮ್ಮ ಆಪ್ತರೆಂದು ನಾಟಕ ಮಾಡುವ ಅದೆಷ್ಟೋ ಜನ..ನಮ್ಮಿಂದ ಲಾಭದ ನಿರೀಕ್ಷೆ ಯಲ್ಲೇ ಇರುತ್ತಾರೆ ಅವರು ನಿಮ್ಮ ಸ್ನೇಹಿತ ರಾಗಿರಬಹುದು ,ಬಂಧು ಗಳಾಗಿರಬಹುದು,ಸಹೋದ್ಯೋಗಿ ಗಳಾಗಿರ ಬಹುದು,ರಕ್ತ ಸಂಬಂಧಿಯೇ ಆಗಿರಬಹುದು ಅವರನ್ನು ಸ್ವಲ್ಪ ದೂರವೇ ಇಟ್ಟಿರಿ ಯಾಕೆಂದರೆ …ಈ ಮೇಕೆ ಗಳು ತಾವು ಸಭ್ಯರಂತೆ ನಾಟಕ ಮಾಡಿ ಹೊಲಸು ತಿಂದು ನಿಮ್ಮ ಮುಖಕ್ಕೆ ಒರೆಸಿ ಹೋಗುವ ಮುನ್ನ ನೀವು ಎಚ್ಚರ ದಿಂದಿರಿ ಹಾಗು …ಇಂತಹ

ದುಷ್ಟರಿಂದ ದೂರ ಇದ್ದುಬಿಡಿ

ಡಾ.ಶಶಿಕಿರಣ್ ಶೆಟ್ಟಿ

9945130630
(ವಾಟ್ಸಪ್)
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯ ನೇರವಾಗಿ ನನಗೆ ವಾಟ್ಸಪ್ ಮಾಡಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now