
ಪ್ರಾಥಮಿಕ ಹಂತದಲ್ಲೆ ಪರಿಸರದ ಬಗ್ಗೆ ಜಾಗೃತಿ ಬೆಳಸಬೇಕು- ಬನ್ನಾಡಿ ನಾರಾಯಣ ಆಚಾರ್
ಕುಂದಾಪುರ: ಪ್ರಾಥಮಿಕ ಹಂತದಲ್ಲೆ ಮಕ್ಕಳಲ್ಲಿ ಪರಿಸರ ಜಾಗೃತಿ ಬೆಳೆಸಿದರೆ ಪ್ರಕೃತಿಯ ಮೇಲಿನ ಬಹುದೊಡ್ಡ ಹಾನಿಯನ್ನು ತಪ್ಪಿಸಬಹುದು ಎಂದು ಮುಂಬೈ ಒಎನ್ಜಿಸಿ ಇದರ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಅಭಿಪ್ರಾಯಪಟ್ಟರು.
ಭಾನುವಾರ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ದೂಳಂಗಡಿ) ಇಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಪೇತ್ರಿ, ಬ್ರಹಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದೊಂದಿಗೆ 312ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ ಪ್ರಕೃತಿ ಇಲ್ಲದಿದ್ದರೆ ನಾವುಗಳು ಉಳಿಯಲು ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ನಾವುಗಳು ಕೃತಕ ಆಕ್ಸಿಜನ್ ತೆಗೆದುಕೊಂಡ ದಿನಗಳನ್ನು ಮಕ್ಕಳಿಗೆ ನೆನಪಿಸಿದರು. ಮುಂದಿನ ತಲೆಮಾರು ಬದುಕಬೇಕಾದರೆ ಈಗಲೇ ಗಿಡ ನಡುವ ಮನಸ್ಥಿತಿ ಸೃಷ್ಠಿಸಿಕೊಳ್ಳಿ. ಪಂಚವರ್ಣ ಸಂಘಟನೆಯಂತೆ ಮನೆ ಮನೆಯಲ್ಲಿ ಪರಿಸರವನ್ನು ಪ್ರೀತಿಸುವ ಜನಾಂಗ ಸೃಷ್ಠಿಯಾಗಲಿ ಎಂದು ಹಾರೈಸಿದರು.
ಹಂಗಾರಕಟ್ಟೆ ಶಾಲೆಯ ವಿಜ್ಞಾನ ಶಿಕ್ಷಕಿ ವೀಣಾ ಶೆಟ್ಟಿ ಗಿಡ ನಡುವ ಹಾಗೂ ಬೆಳೆಸುವ ಕಾರ್ಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಭೋದಿಸಿ ಪರಿಸರದ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಶಾಲಾ ಎಸ್ಡಿಎಂಸಿಯ ಪ್ರಕಾಶ್, ಪೋಷಕರ ಪರವಾಗಿ ರಮೇಶ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ವಿದ್ಯಾರ್ಥಿ ಮುಖಂಡ ಅಮೃತ್ ಇದ್ದರು. ರವೀಂದ್ರ ಕೋಟ ಸ್ವಾಗತಿಸಿದರೆ, ಪ್ರಭಾಕರ್ ಬಿಎಸ್ಎನ್ ಎಲ್ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು. ಪಂಚವರ್ಣದ ದಿನೇಶ್ ಆಚಾರ್ ಸಹಕರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now