





ಉಡುಪಿ, 18 ಏಪ್ರಿಲ್ 2025: ಶುಭ ಶುಕ್ರವಾರವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತೆಯೋ ಹಾಗೆ ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ಪವಿತ್ರ ಸಪ್ತಾಹದ ಅಂಗವಾದ ಶುಭ ಶುಕ್ರವಾರವು ಯೆಹೂದ್ಯರ ಆಚರಣೆಯಾದ ಪಾಸ್ಕದೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ಅಧಿಕೃತ ಶುಭಸಂದೇಶಗಳ ಪ್ರಕಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದು ಶುಕ್ರವಾರವೆನ್ನಲಾಗಿದೆ.



ಇಂದು ಕೊಳಲಗಿರಿ ಚರ್ಚ್ ನಲ್ಲಿ ಯೇಸುಕ್ರಿಸ್ತರನ್ನು ಶಿಲುಬೆಗೆರಿಸಿದ ಪ್ರತೀಕವಾಗಿ ಶಿಲುಬೆಯ ದಾರಿಯ ಮೂಲಕ ಮೊದಲ್ಗೊಂಡಿತು. ನಂತರ ಬಲಿಪೂಜೆಯನ್ನು, ಧರ್ಮಗುರುಗಳು ಉಡುಪಿ ಸಂಪದ ಇದರ ನಿರ್ದೇಶಕರೂ ಅದ ವಂದನೀಯ ರೆಜಿನಾಲ್ಡ್ ಪಿಂಟೋ ಅವರೊಂದಿಗೆ ಚರ್ಚಿನ ಗುರುಗಳಾದ ವಂದನೀಯ ಜೋಸೆಫ್ ಮಾಚಾದೋ ಹಾಗೂ ಡಿಯಾಕೋನ್ ಒಸ್ವಾಲ್ಡ್ ವಾಜ್ ಅವರು ನೆರವೇರಿಸಿದರು. ಐಸಿವೈಮ್ ಘಟಕದ ಸದಸ್ಯರುಗಳು ಮುತುವರ್ಜಿಯನ್ನು ವಹಿಸಿದ್ದರು..



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























