
ಹಾವಂಜೆ ಗ್ರಾಮದ ಕೀಳಂಜೆ, ಶ್ರೀ ಗದ್ದುಗೆ ಅಮ್ಮನವರ ಅಲಂಕಾರ ಪೂಜೆಯೊಂದಿಗೆ, ಅಮ್ಮನ ದರ್ಶನ ಸೇವೆ ಗೊಂದೋಳು ಕುಣಿತ ಸೇವೆ ಇಂದು ಭಾನುವಾರ23/03/2025 ರ 7 ಗಂಟೆಯಿಂದ ಕೀಳಂಜೆ ಗೊಂದೋಳು ಗದ್ದೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಊರಿನ ಪ್ರಮುಖರು,ಹಿರಿಯರು ಊರಿನ ಭಕ್ತಾಭಿಮಾನಿಗಳು ಪೂಜೆಯಲ್ಲಿ ದರ್ಶನ ಸೇವೆಯಲ್ಲಿ ಭಾಗಿಯಾಗಿ ಅಮ್ಮನ ಶ್ರೀ ಮುಡಿ ಗಂಧ ಪ್ರಸಾದ ಸ್ವಿಕರಿಸಿದರು
ದ್ಯುಟಿಗೆ ಕುಣಿತ ಸೇವೆಯಲ್ಲಿ ಊರಿನ ಹಿರಿಯರು ಯುವಕರು ಕುಣಿದು ಸಂಭ್ರಮಿಸಿದರು. ಊರಿನ ಯುವ ಉತ್ಸಾಹಿ ಕಮಿಟಿಯ ಮುಂದಾಳುಗಳು ಸಮಾಜ ಸೇವಕರು ಆದ ಶ್ರೀ ಸತೀಶ್ ಪೂಜಾರಿ ಕೀಳಂಜೆ ಹಾಗೂ.ಶ್ರೀ ವಿಕ್ರಂತ್ ಶೆಟ್ಟಿ ಕೀಳಂಜೆ ಇವರ ನೇತೃತ್ವ ದಲ್ಲಿ ಹಾಗೂ ಶ್ರೀ ಅದಪ್ಪ ಶೆಟ್ರ ಹಿರಿತನದಲ್ಲಿ ಗೊಂದೋಳು ಸೇವೆ ಊರಿನ ಯುವಕರ, ಮಹಿಳೆಯರ ಸಹಕಾರದಿಂದ ವಿಜೃಂಭಣೆ ಯಿಂದ ಜರಗಿತು ಈ ಸಂದರ್ಭದಲ್ಲಿ ಉಪಸ್ಥಿತಿ ಕುಕ್ಕೆಹಳ್ಳಿ ಶ್ರೀ ಅಮ್ಮನವರ ಗದ್ದಿಗೆಯ ಪ್ರಧಾನ ಅರ್ಚಕರಾದ ಜಯರಾಮ್ ಮತ್ತು ಅವರ ಸಂಗಡಿಗರು ಹಾಗೂ ಹಾಗೂ ಮಹಾ ವಿಷ್ಣು ಮಹಾ ಲಿಂಗೇಶ್ವರ ಪ್ರದಾನ ಅರ್ಚಕರಾದ ಶ್ರೀಕಾಂತ್ ಭಟ್. ಕೀಳಂಜೆ ಊರಿನ ಗುರುಹಿರಿಯರು ಯುವಕ ಯುವತಿಯರು ಉಪಸ್ಥಿತಿ ಇದ್ದರು 💐




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























