ತುಳುಕೂಟ ಉಡುಪಿ: 2026-27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ-ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ

ತುಳುಕೂಟ ಉಡುಪಿ: 2026-27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ-ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ
0Shares

ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ತುಳುಕೂಟ ಉಡುಪಿ (ರಿ.) ಇದರ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ಪ್ರಕಟಿಸಲಾಗಿದೆ.

ಸ್ಥಾಪಕ ಅಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾ‌ರ್, ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್‌, ಶೋಭಾ ಶೆಟ್ಟಿ ಹಾಗೂ ಡಾ. ವಿ.ಕೆ. ಯಾದವ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರು, ಉಪ ಕಾರ್ಯದರ್ಶಿಗಳಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್ ಹಾಗೂ ಮೋಹನ್ ಶೆಟ್ಟಿ ನಿಡಂಬೂರು, ಖಜಾಂಚಿಯಾಗಿ ಚೈತನ್ಯ ಎಂ.ಜಿ. ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್‌ ಶೆಟ್ಟಿ ತೋನ್ಸೆ, ಉದಯ್ ಕುಮಾರ್ ತೆಂಕನಿಡಿಯೂರು ಮತ್ತು ಶಿಲ್ಪಾ ಜೋಷಿ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಡಾ. ಗಣನಾಥ್ ಎಕ್ಕಾರ್, ರವಿಶಂಕರ್ ರೈ, ಎಸ್.ಎ. ಕೃಷ್ಣಯ್ಯ, ಮನೋರಮಾ ಶೆಟ್ಟಿ, ಶಾಂತಾರಾಮ ಶೆಟ್ಟಿ ಹಾಗೂ ವಿಶ್ವನಾಥ್‌ ಶೆಣೈ ಅವರನ್ನು ನೇಮಕ ಮಾಡಲಾಗಿದೆ.

ಪ್ರಚಾರ ಮಾಧ್ಯಮ ಸಂಚಾಲಕರಾಗಿ ಯಶೋದಾ ಕೇಶವ್ ಸೇರಿದಂತೆ, ವರ್ಷದ 12 ಪ್ರಮುಖ ಕಾರ್ಯಕ್ರಮಗಳಿಗೆ ವಿವಿಧ ಸಂಚಾಲಕರನ್ನು ನೇಮಕ ಮಾಡಲಾಗಿದೆ.

ತುಳುಮಿನದ ಸಂಚಾಲಕರಾಗಿ ದಯಾನಂದ ಡಿ. ಕಿದಿಯೂರು, ಕೆಸ್ತೂರು ನಾಟಕ ಪ್ರಶಸ್ತಿ – ಪ್ರಭಾಕರ ಭಂಡಾರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ -ಜಯರಾಮ್ ಶೆಟ್ಟಿಗಾರ್, ಪಣಿಯಾಡಿ ಕಾದಂಬರಿ ಪ್ರಶಸ್ತಿ – ಪ್ರಕಾಶ್ ಸುವರ್ಣ ಕಟಪಾಡಿ, ಮದರೆಂಗಿದರಂಗ್ ಲೇಸ್ – ರೂಪಶ್ರೀ, ಆಟಿದ ಲೇಸ್ -ಪ್ರಭಾವತಿ ವಿಶ್ವನಾಥ್, ಆಟಿದ ಕಷಾಯ -ವಿವೇಕಾನಂದ ಎನ್., ಸೋನದ ಸೇಸೆ ಲೇಸ್ -ರತ್ನಾಕ‌ರ್ ಇಂದ್ರಾಳಿ, ತುಳುವೆರೆ ಗೊಬ್ಬುಲು – ಪ್ರಸನ್ನ ಕುಮಾರ್, ಜೋಕ್ಲಿಗಾದ್ ತುಳುವ ಕಥೆ – ವಿದ್ಯಾ ಸರಸ್ವತಿ, ತುಳು ಪಠ್ಯ – ವಿಶ್ವನಾಥ್ ಬಾಯರಿ ಹಾಗೂ ಜೋಕ್ಷೆಗಾದ್ ತುಳುವ ನಡಕೆ – ದಿನೇಶ್ ಶೆಟ್ಟಿಗಾ‌ರ್ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ಸಮಿತಿ ಸದಸ್ಯರಾಗಿ ಯು.ಜೆ. ದೇವಾಡಿಗ, ಭಾರತಿ ಟಿ.ಕೆ., ಗಣೇಶ್ ಕೋಟ್ಯಾನ್, ಯು.ಎಸ್. ಉಮ್ಮರ್, ಜಯಲಕ್ಷ್ಮೀ ಅಂಬಲಪಾಡಿ, ಹರಿಪ್ರಸಾದ್ ರೈ, ಡಾ. ರಶ್ಮಿ ಅಮ್ಮೆಂಬಳ, ಉಷಾ ಸುವರ್ಣ, ರೇವತಿ ಆ‌ರ್. ಶೆಟ್ಟಿ, ಸುಕನ್ಯಾ ಶೇಖ‌ರ್, ಸರೋಜಾ ಯಶ್ವಂತ್, ಸುಮಾಲಿನಿ ದಯಾನಂದ್‌, ಸುಜಾತಾ ಮೊಯ್ಲಿ, ಗೀತಾ ಸುವರ್ಣ, ಮೊಹಮ್ಮದ್ ಮೌಲಾ, ಭಾರತಿ ಶೆಟ್ಟಿ, ಭೋಜ ಯು., ದಯಾನಂದ ಶೆಟ್ಟಿ ದೆಂದೂರ್, ವತ್ಸಲಾ ಕೋಟ್ಯಾನ್, ಸಂಧ್ಯಾ ಉದಯ್, ಪೂರ್ಣಿಮಾ ಸುದರ್ಶನ್, ಸರೋಜಾ ದೇವಾಡಿಗ, ಸುಲತಾ ಶೆಟ್ಟಿ, ಸದಾನಂದ ಶೆಟ್ಟಿ ಹಾಗೂ ಶೇಖ‌ರ್ ಕಲ್ಮಾಡಿ ಆಯ್ಕೆಯಾಗಿದ್ದಾರೆ.

ಹೊಸ ಸಮಿತಿಯು ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಅದರ ಪರಿಚಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರೀಕ್ಷೆಯಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now