ಉಡುಪಿ ಕಲಾಕ್ಷೇತ್ರ : ಯಕ್ಷಗಾನ ತರಗತಿ ಉದ್ಘಾಟನೆ

ಉಡುಪಿ ಕಲಾಕ್ಷೇತ್ರ : ಯಕ್ಷಗಾನ ತರಗತಿ ಉದ್ಘಾಟನೆ

0Shares

ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 2025/26 ಸಾಲಿನ ಯಕ್ಷಗಾನ ತರಗತಿ ಯನ್ನು ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಉದ್ಘಾಟಿಸಿ ಅಮೃತ ಮಹೋತ್ಸವ ವರ್ಷದ ಈ ಕಾಲಘಟ್ಟ ದಲ್ಲಿ ಸಂಘ ಸ್ಥಾಪನೆ ಮಾಡಿದ ಹಿರಿಯರು ಕಂಡ ಕನಸನ್ನು ನನಸಾಗಿಸುವ ಕಾರ್ಯ ನಮ್ಮಿಂದ ಆಗಬೇಕಿದೆ,ಯಕ್ಷಗಾನ ಕಲೆಯ ಶಿಕ್ಷಣ ವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಮ್ಮ ಮುಂದಿದೆ, ನಾವು ಸಂಘದ ವಿನಮ್ರ ಸೇವಕರಾಗಿ ಅದನ್ನು ಮುಂದುವರೆಸಿ ಕೊಂಡು ಬಂದಿದ್ದೇವೆ ಎಂದು ಹೇಳಿ ವಿದ್ಯಾರ್ಥಿಗಳು ಈ ತರಗತಿ ಗಳಿಂದ ಉತ್ತಮ ಕಲಾವಿದರಾಗಿ ಸಂಘಕ್ಕೆ ಹಾಗೂ ಪೋಷಕರಿಗೆ ಕೀರ್ತಿ ಯನ್ನು ತರಲಿ ಎಂದು ಶುಭ ಹಾರೈಸಿದರು, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಯವರು ಸಂಘದ ದೈವ ದೇವರುಗಳ ಅನುಗ್ರಹ ಶಿಕ್ಷಾರ್ಥಿ ಗಳಿಗೆ ಸದಾ ಇರಲಿ ಎಂದು ಹಾರೈಸಿದರು, ನಿಕಟ ಪೂರ್ವ ಅಧ್ಯಕ್ಷ ಜಿ, ಬಾಬು ಗೌಡ ಉಪಸ್ಥಿತರಿದ್ದರು, ಯಕ್ಷಗುರು ಉದಯ ಕುಮಾರ್ ಮಧ್ಯಸ್ಥ ಪೆರಂಪಳ್ಳಿ, ಚರಿತ್ ಕುಮಾರ್ ಹೇರೂರು,
ವೇದಿಕೆಯಲ್ಲಿದ್ದರು, ಕೋಶಾಧಿಕಾರಿ ನರಸಿಂಹ ಎನ್, ಆರ್ ಸ್ವಾಗತಿಸಿದರು,

ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು, ಕಲಾಕಾರ್ಯದರ್ಶಿ ಶ್ರೀಧರ್ ಭಟ್ ಧನ್ಯವಾದ ಸಮರ್ಪಿಸಿದರು, ಸಂಘದ ಸದಸ್ಯರು, ವಿದ್ಯಾರ್ಥಿಗಳ ಪೋಷಕರು , ಕಲಾಭಿಮಾನಿಗಳು ಭಾಗವಹಿಸಿದ್ದರು,

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now