ಕಾರ್ತಿಕ್ ಅವರಿಗೆ ರೆಡ್ ಕ್ರಾಸ್ ರಕ್ತದಾನ ರಾಜ್ಯ ಪುರಸ್ಕಾರ

ಕಾರ್ತಿಕ್ ಅವರಿಗೆ ರೆಡ್ ಕ್ರಾಸ್ ರಕ್ತದಾನ ರಾಜ್ಯ ಪುರಸ್ಕಾರ

0Shares

ಉಡುಪಿ : ವಿಶ್ವ ರಕ್ತದಾನಿಗಳ ಅಂಗವಾಗಿ ನಡೆದ ರಾಜ್ಯ ಮಟ್ಟದ ರೆಡ್‍ಕ್ರಾಸ್ ದಿನಾಚರಣೆ ಮತ್ತು ಪುರಸ್ಕಾರ ಸಮಾರಂಭದಲ್ಲಿ ಮಣಿಪಾಲದ ದಂತ ವಿಜ್ಞಾನ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಶ್ರೀ ಕಾರ್ತಿಕ್ ಎಂ. ಅವರಿಗೆ ರಾಜ್ಯ ರೆಡ್ ಕ್ರಾಸ್‍ನ ರಾಜ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

31 ವರ್ಷದ ಕಾರ್ತಿಕ್ ಅವರು 57 ಬಾರಿ ರಕ್ತದಾನ ಮಾಡಿದ ಸಾಧನೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀಮತಿ ಮೀನಾಕ್ಷಿ ಕೃಷ್ಣಬೈರೇಗೌಡ, ರಾಜ್ಯ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ರೆಡ್‍ಕ್ರಾಸ್ ಉಪಾಧ್ಯಕ್ಷರಾದ ಶ್ರೀ ಭಾಸ್ಕರ್‍ರಾವ್ ಉಪಸಭಾಪತಿ ಶ್ರೀನಿವಾಸ ಹ್ಯಾಟಿ, ಕರ್ನಾಟಕ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ, ಉಮಾಶಂಕರ್ ಅವರು ಕಾರ್ತಿಕ್ ಅವರನ್ನು ಗೌರವಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now