ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ “ಉಡುಪಿ ದಿಂಡಿ” ಮೆರವಣಿಗೆ ಸಂಪನ್ನ

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ “ಉಡುಪಿ ದಿಂಡಿ” ಮೆರವಣಿಗೆ ಸಂಪನ್ನ

0Shares

ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವದ ಪರ್ವಕಾಲದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೊ , ಹಣ್ಣುಗಳಿಂದ ವಿಶೇಷ ಅಲಂಕಾರ ಹಾಗೂ ಜೂ 01 ಆದಿತ್ಯವಾರ ಸಂಜೆ 5 ಗಂಟೆಗೆ ಪುರಾಣ ಪ್ರಸಿದ್ಧ ಭಜನಾ ದಿಂಡಿ ಮೆರವಣಿಗೆ ನೆಡೆಯಿತು

ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಆಗಮಿಸಿದಾಗ ದೇವಳದವತಿಯಿಂದ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು , ಶ್ರೀಪಾದರು ಭಜನಾ ದಿಂಡಿ ಉತ್ಸವ ಮೆರವಣಿಗೆಗೆ ದೀಪ ಬೆಳಗಿಸಿ ಚಾಲನೆ ನೀಡಿದರು , ಶ್ರೀಪಾದರನ್ನು ವಿಶೇಷ ಹೂಗಳಿಂದ ಅಲಂಕೃತ ವಾಹನದಲ್ಲಿ ಪೀಠದಲ್ಲಿ ಕುಳಿತು ಭಜನಾ ದಿಂಡಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಾಧಿಗಳನ್ನು ಅನುಗ್ರಹಿಸಿದರು .

ಪೂಜ್ಯ ಗುರುಗಳ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಈ ಶುಭಸಂದರ್ಭದಲ್ಲಿ ಶ್ರೀಗುರುಗಳ ಆರಾಧನೆ ಅಂಗವಾಗಿ ,ದಿವ್ಯ ಸ್ವರ್ಣ ಪಾದುಕೆ ಮೆರವಣಿಗೆಯಲ್ಲಿ ಸಾಗಿಬಂತು , ಭಕ್ತರೂ ಅಲ್ಲಲ್ಲಿ ಆರತಿ ನೀಡಿ ಪೂಜೆ ಸಲ್ಲಿಸಿದರು ಶ್ರೀ ವಿಠೋಬಾ ರುಖುಮಾಯಿ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು ಉಡುಪಿ ದೇವಳದಿಂದ ಹೊರಟು ಐಡಿಯಲ್ ಸರ್ಕಲ್ , ಹಳೇ ಡಯಾನ ಸರ್ಕಲ್ , ತ್ರಿವೇಣಿ ಸರ್ಕಲ್ , ಚಿತ್ತರಂಜನ್ ವೃತ್ತ , ಕೊಳದಪೇಟೆಯಾಗಿ ದೇವಳಕ್ಕೆ ಬಂದು ತಲುಪಿತು ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು , ಮೆರವಣಿಗೆಯಲ್ಲಿ ವಿಶೇಷ ವಾಗಿ ಶ್ರೀ ವಿಠೋಬಾ ರುಖುಮಾಯಿ , ಶ್ರೀ ಪುರಂದರದಾಸ , ಶ್ರೀ ಕನಕದಾಸ ವೇಷ ಧರಿಸಿ ಮೆರಗಿ ಹೆಚ್ಚಿಸಿದರು , ಸಾವಿರಾರು ಪುರುಷರು , ಮಹಿಳಾಯರು , ಯುವಕ , ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು , ವಿಶೇಷ ಆಕರ್ಷಣೆಯ ಭವ್ಯ ದಿಂಡಿ ಉತ್ಸವದಲ್ಲಿ ಊರ ಪರಊರಿನ ವಿವಿಧ ಭಜನಾ ತಂಡಗಳು ಭಾಗವಹಿಸಿ ಸಹಕರಿಸಿದರು

ಸಮಾರಂಭದಲ್ಲಿ ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ , ಆಡಳಿತ ಮೊಕ್ತೇಸರ ಪಿ ವಿ ಶೆಣೈ , ನರಹರಿ ಪೈ , ವಿಶಾಲ್ ಶೆಣೈ , ಉಮೇಶ್ ಪೈ , ಭಾಸ್ಕರ್ ಶೆಣೈ , ದೀಪಕ್ ಭಟ್ , ದಯಾಘನ್ ಭಟ್ ಹಾಗೂ ವಿಶ್ವನಾಥ್ ಭಟ್ , ವಸಂತ ಕಿಣೆ , ಗಣೇಶ್ ಕಿಣಿ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ , ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿಯ ಸದಸ್ಯರು ಸಹಕರಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now