
ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವದ ಪರ್ವಕಾಲದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೊ , ಹಣ್ಣುಗಳಿಂದ ವಿಶೇಷ ಅಲಂಕಾರ ಹಾಗೂ ಜೂ 01 ಆದಿತ್ಯವಾರ ಸಂಜೆ 5 ಗಂಟೆಗೆ ಪುರಾಣ ಪ್ರಸಿದ್ಧ ಭಜನಾ ದಿಂಡಿ ಮೆರವಣಿಗೆ ನೆಡೆಯಿತು

ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಆಗಮಿಸಿದಾಗ ದೇವಳದವತಿಯಿಂದ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು , ಶ್ರೀಪಾದರು ಭಜನಾ ದಿಂಡಿ ಉತ್ಸವ ಮೆರವಣಿಗೆಗೆ ದೀಪ ಬೆಳಗಿಸಿ ಚಾಲನೆ ನೀಡಿದರು , ಶ್ರೀಪಾದರನ್ನು ವಿಶೇಷ ಹೂಗಳಿಂದ ಅಲಂಕೃತ ವಾಹನದಲ್ಲಿ ಪೀಠದಲ್ಲಿ ಕುಳಿತು ಭಜನಾ ದಿಂಡಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಾಧಿಗಳನ್ನು ಅನುಗ್ರಹಿಸಿದರು .
ಪೂಜ್ಯ ಗುರುಗಳ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಈ ಶುಭಸಂದರ್ಭದಲ್ಲಿ ಶ್ರೀಗುರುಗಳ ಆರಾಧನೆ ಅಂಗವಾಗಿ ,ದಿವ್ಯ ಸ್ವರ್ಣ ಪಾದುಕೆ ಮೆರವಣಿಗೆಯಲ್ಲಿ ಸಾಗಿಬಂತು , ಭಕ್ತರೂ ಅಲ್ಲಲ್ಲಿ ಆರತಿ ನೀಡಿ ಪೂಜೆ ಸಲ್ಲಿಸಿದರು ಶ್ರೀ ವಿಠೋಬಾ ರುಖುಮಾಯಿ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು ಉಡುಪಿ ದೇವಳದಿಂದ ಹೊರಟು ಐಡಿಯಲ್ ಸರ್ಕಲ್ , ಹಳೇ ಡಯಾನ ಸರ್ಕಲ್ , ತ್ರಿವೇಣಿ ಸರ್ಕಲ್ , ಚಿತ್ತರಂಜನ್ ವೃತ್ತ , ಕೊಳದಪೇಟೆಯಾಗಿ ದೇವಳಕ್ಕೆ ಬಂದು ತಲುಪಿತು ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು , ಮೆರವಣಿಗೆಯಲ್ಲಿ ವಿಶೇಷ ವಾಗಿ ಶ್ರೀ ವಿಠೋಬಾ ರುಖುಮಾಯಿ , ಶ್ರೀ ಪುರಂದರದಾಸ , ಶ್ರೀ ಕನಕದಾಸ ವೇಷ ಧರಿಸಿ ಮೆರಗಿ ಹೆಚ್ಚಿಸಿದರು , ಸಾವಿರಾರು ಪುರುಷರು , ಮಹಿಳಾಯರು , ಯುವಕ , ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು , ವಿಶೇಷ ಆಕರ್ಷಣೆಯ ಭವ್ಯ ದಿಂಡಿ ಉತ್ಸವದಲ್ಲಿ ಊರ ಪರಊರಿನ ವಿವಿಧ ಭಜನಾ ತಂಡಗಳು ಭಾಗವಹಿಸಿ ಸಹಕರಿಸಿದರು
ಸಮಾರಂಭದಲ್ಲಿ ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ , ಆಡಳಿತ ಮೊಕ್ತೇಸರ ಪಿ ವಿ ಶೆಣೈ , ನರಹರಿ ಪೈ , ವಿಶಾಲ್ ಶೆಣೈ , ಉಮೇಶ್ ಪೈ , ಭಾಸ್ಕರ್ ಶೆಣೈ , ದೀಪಕ್ ಭಟ್ , ದಯಾಘನ್ ಭಟ್ ಹಾಗೂ ವಿಶ್ವನಾಥ್ ಭಟ್ , ವಸಂತ ಕಿಣೆ , ಗಣೇಶ್ ಕಿಣಿ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ , ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿಯ ಸದಸ್ಯರು ಸಹಕರಿಸಿದರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























