
ಉಡುಪಿ : ಮುಂಗಾರು ಮಳೆಯಲ್ಲಿ ಸೈಕಲ್ ಸವಾರಿ ಮಾಡುವುದು, ಅದರಲ್ಲೂ ಅಗುಂಬೆ ಘಾಟ್ನಲ್ಲಿ 14 ಹೇರ್ಪಿನ್ ತಿರುವುಗಳನ್ನು ಸುರಿಯುವ ಮಳೆಯೊಂದಿಗೆ ಕ್ರಮಿಸುವುದು ಸುಂದರ ಹಾಗೂ ಸವಾಲಿನಿಂದ ಕೂಡಿದೆ. ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮದ ಸುಂದರ ಪರಿಸರದಲ್ಲಿ ಬೆಳೆದು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಮುನ್ನಡೆದು, ಇದೀಗ ತನ್ನ ಸಾಧನೆಯ ಮೂಲಕ ಅವಿಭಾಜ್ಯ ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವಾ ಇವರು ಮತ್ತೊಂದು ಮೈಲುಗಲ್ಲನ್ನು ಯಶಸ್ವಿಯಾಗಿ ದಾಟಿದ್ದಾರೆ. ತನ್ನ ಮಾಜಿ ಸಹೋದ್ಯೋಗಿ ಪ್ರೊಫೆಸರ್ ಸಿರಿಲ್ ಮಥಿಯಾಸ್ ಅವರ 102 ವರ್ಷದ ತಾಯಿ, ತೀರ್ಥಹಳ್ಳಿಯಲ್ಲಿ ವಾಸಿಸುತ್ತಿರುವ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಈ ಸವಾರಿ ಇನ್ನಷ್ಟು ಐತಿಹಾಸಿಕ ಮಾಡಿದ ಕೀರ್ತಿ ಇವರದು. 60ರ ಹರೆಯಕ್ಕೆ ಸಮೀಪಿಸುತ್ತಿರುವ ಇವರ ಈ ಸಾಧನೆ ಯುವಕರಿಗೆ ನಾಚಿಸುವಂತಿದೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























