
ಮುಂಬಯಿ ; ಕರುನಾಡ ಸಿರಿ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಟ
ಮಾನವೀಯ ಧರ್ಮಾನುಸಾರ ಬಾಳು ಬೆಳಗಿಸಿ : ಸುನೀತ ಶರ್ಮ
ಮುಂಬಯಿ (ಆರ್ಬಿಐ), ಎ.23: ಮುಂಬಯಿಯಲ್ಲಿನ ಕರುನಾಡ ಸಿರಿ ಸಂಸ್ಥೆಯು ಸಾಂತಕ್ರೂಜ್ ಅಲ್ಲಿನ ಲಯನ್ಸ್ ಕ್ಲಬ್ ಮೈದಾನದಲ್ಲಿ ಕಳೆದ ಭಾನುವಾರ ವಾರ್ಷಿಕ ಕ್ರಿಕೆಟ್ ಪಂದ್ಯಟ ಆಯೋಜಿಸಿದ್ದು ಕ್ರಿಕೆಟೋತ್ಸವಕ್ಕೆ ಚಾಲನೆಯನ್ನಿತ್ತು ಸಿಸಿಐ ಲಾಜಿಸ್ಟಿಕ್ಸ್ ಲಿಮಿಟೆಡ್ ಇದರ ನಿರ್ದೇಶಕಿ ಮುಂಬಯಿ ಬಿಜೆಪಿ ಉಪಾಧ್ಯಕ್ಷೆ ಸುನೀತ ಶರ್ಮ ತಿಳಿಸಿದರು.

ಹೇಗೆ ಕ್ರೀಡೆಗೆ ಜಾತಿಪಂಥ ಇಲ್ಲವೋ ಹಾಗೆನೇ ನಾನೂ ಯಾವುದೇ ಜಾತಿಪಾತಿ ನಂಬುವುದಿಲ್ಲ. ನಾನು ಮಾನವಿಯತೆಯನ್ನು ನಂಬುತ್ತೇನೇ. ನಾನು ಒಬ್ಬಳು ಮನುಷ್ಯಳೇ ಹೊರತು ಮಾನವೀಯ ಧರ್ಮಾನುಸಾರ ಬದುಕುತ್ತೇನೆ. ತಾವೂ ಇದನ್ನೇ ರೂಢಿಸಿರಿ. ಸಾಮರಸ್ಯದ ಜೀವನ ನಡೆಸುವ ಎಲ್ಲರೊಂದಿಗೆ ನಾನು ಯಾವಗಲು ಸಹಕಾರಕ್ಕಾಗಿ ಸಿದ್ಧ ಎಂದು ಶರ್ಮ ಮಾತನಾಡಿದರು.
ಸಮಾಜ ಸೇವಕಿ ಶ್ರೀದೇವಿ ರಾವ್ ಮಾತನಾಡಿ ಕರುನಾಡ ಸಿರಿಯ ಸಮರ್ಪಣೆ ಮತ್ತು ಸಂಘಟನಾ ಕೌಶಲ್ಯದ ಫಲವಾಗಿ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿ ಕಾರ್ಯಚರಿಸುತ್ತಿದೆ ಎಂದು ಶ್ಲಾಘಿಸಿದರು.
ಹಿರಿಯರ ವಿಭಾಗದಲ್ಲಿ ಪ್ರೀತಮ್ ಇಲೆವೆನ್ ಮೊದಲ ಸ್ಥಾನಕ್ಕೆ ಭಾಜನವಾಗಿದು ಲಲಿತ ಎಸ್.ಕೆ ಫೌಂಡೇಶನ್ ದ್ವಿತಿಯ ಸ್ಥಾನ ಪಡೆಯಿತು. ಮಕ್ಕಳ ವಿಭಾಗದಲ್ಲಿ ಎನ್ಎಸ್ ಟೋಕೋ ರೈಡರ್ಸ್ ಪ್ರಥಮ ಸ್ಥಾನದೊಂದಿಗೆ ವಿಜೇತರಾಗಿದ್ದು ಶ್ಯಡೋ ಸ್ಟ್ರೈಕರ್ಸ ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು. ಪಂದ್ಯಾಟದಲ್ಲಿ ಹಿರಿಯರ 08 ತಂಡಗಳು, ಮಕ್ಕಳ 10 ತಂಡಗಳು ಭಾಗವಹಿಸಿದ್ದವು. ಅದುಅಲ್ಲದೆ ಪುರುಷರ ಹಾಗೂ ಮಹಿಳಾ ತಂಡಗಳೂ ಭಾಗವಹಿಸಿದ್ದವು. ಮೊದಲಿಗೆ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಆಡಿಸಲಾಗಿದ್ದು ಈ ಪಂದ್ಯದಲ್ಲಿ ನಮಸ್ಟಟ್ಸ್ ಕೋಚಿಂಗ್ ಕ್ಲಾಸ್ನ ಮಾಜಿ ಹಾಗೂ ಹಾಲಿ ವಿದ್ಯಾಥಿಗಳು ಜೊತೆಗೆ ಧಾರವಿಯ ದಿ ಹೋಪ್ ಫೌಂಡೇಷನ್ನ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದ್ದರು. ಪಂದ್ಯಾಟದಲ್ಲಿ ಮಕ್ಕಳು ಹಾಗೂ ಹಿರಿಯರಿಗಾಗಿಯೂ ಕ್ರಿಕೆಟ್ ಪಂದ್ಯಟ ಆಯೋಜಿಸಲಾಗಿತ್ತು.
ಕರುನಾಡ ಸಿರಿ ಪ್ರಮುಖ ಸದಸ್ಯರಾದ ಅನಿಲ್ ಗೌಡ, ಯೋಗೇಶ್ ಸುಪೆಕರ, ಮಂಗೇಶ್ ರಾಯಪನೋರ್ ಅವರು ಶ್ರಮಿಸಿದ್ದು ಕರುನಾಡ ಸಿರಿ ಅಧ್ಯಕ್ಷ ಬಾಲಚಂದ್ರ ದೇವಾಡಿಗ ಸ್ವಾಗತಿಸಿದರು. ಮಹಿಳಾ ಸದಸ್ಯೆಯರಾದ ಲಲಿತ ಗೌಡ, ಮಮತಾ ಗೌಡ, ಅಮೃತ ಗೌಡ ಅತಿಥಿಗಳಿಗೆ ತುಳಸಿ ಗಿಡವನ್ನಿತ್ತು ಸತ್ಕರಿದರು. ದುರ್ಗಪ್ಪ ವೈ.ಕೋಟಿಯಾವರ್ ಕಾರ್ಯಕ್ರಮ ನಿರೂಪಿಸಿದರು. ಭೀಮರಾಯ ಚಿಲ್ಕ ವಂದಿಸಿದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























