
ಮಂಗಳೂರು, ಎಪ್ರಿಲ್ 25, 2026: ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ವಂದನೀಯ ರೂಪೇಶ್ ಅಶೋಕ್ ಮಾಡ್ತ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ನೂತನ ನೇಮಕಾತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅವರು ಜೂನ್ 1, 2026 ರಿಂದ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಧರ್ಮಕ್ಷೇತ್ರದ ಆಡಳಿತಾತ್ಮಕ ಪದ್ಧತಿಯಂತೆ, ಸಾರ್ವಜನಿಕ ಸಂಪರ್ಕ ಕಚೇರಿಯು ಇಬ್ಬರು ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ: ಒಬ್ಬರು ಧರ್ಮಗುರುಗಳ ಪರವಾಗಿ ಮತ್ತು ಇನ್ನೊಬ್ಬರು ಕ್ರೈಸ್ತ ಶ್ರೀಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುತ್ತಾರೆ. ಕಳೆದ ಐದು ವರ್ಷಗಳಿಂದ ಧರ್ಮಗುರುಗಳ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ ವಂ. ಡಾ. ಜೆ. ಬಿ. ಸಲ್ಡಾನ್ಹಾ ಅವರ ಸೇವಾ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ತೆರವಾದ ಈ ಸ್ಥಾನಕ್ಕೆ ವಂ. ರೂಪೇಶ್ ಮಾಡ್ತ ಅವರನ್ನು ನೇಮಿಸಲಾಗಿದೆ. ಇವರು ಧರ್ಮಕ್ಷೇತ್ರದ ಶ್ರೀಸಾಮಾನ್ಯರ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಶ್ರೀ ರೋಯ್ ಕ್ಯಾಸ್ಟೆಲಿನೊ ಅವರೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ವಂ. ರೂಪೇಶ್ ಮಾಡ್ತ ಅವರು ಧರ್ಮಕ್ಷೇತ್ರದ ಕ್ರಿಯಾಶೀಲ ಧರ್ಮಗುರುಗಳಾಗಿದ್ದು, ಪ್ರಸ್ತುತ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now