
ಪುತ್ತೂರಿನ ಮುರ ಬಳಿ ಮೇ 27ರಂದು ನಡೆದ ಭೀಕರ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಅಪೂರ್ವ ಕೆ. ಭಟ್ ಅವರು, 134 ದಿನಗಳ ಹೋರಾಟದ ಬಳಿಕ ಮಂಗಳವಾರ ಸಂಜೆ 6 ಗಂಟೆಗೆ ಕೊನೆಯುಸಿರೆಳೆದರು.
ಮೇ 27ರಂದು ರಾತ್ರಿ ಪುತ್ತೂರು ಪೇಟೆಯಿಂದ ಮನೆಗೆ ತೆರಳುತ್ತಿದ್ದ ಅಪೂರ್ವ ಕುಟುಂಬದ ಕಾರಿಗೆ, ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಮರ್ಸಿ ಹೆಸರಿನ ಬಸ್ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿತ್ತು. ಬೆಂಗಳೂರು ಮೂಲದ ಆಶಿಶ್-ಅಪೂರ್ವ ದಂಪತಿ ಮಂಗಳೂರಿನವರಾಗಿದ್ದು, ಅವರಿಗೆ ಓರ್ವ ಪುತ್ರಿ ಇದ್ದಾಳೆ. ಬಸ್ ಅಪಘಾತದಿಂದ ಕುಟುಂಬವೇ ತತ್ತರಿಸಿ ಹೋಗಿದ್ದು, ತಂದೆ ಈಶ್ವರ್ ಭಟ್ ಹಾಗೂ ಮಗಳು ಅಪಾಯದಿಂದ ಪಾರಾದರೂ, ಅಪೂರ್ವ ಇಂದು ವಿಧಿವಶರಾಗಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now