ಯುವವಾಹಿನಿ( ರಿ ) ಉಡುಪಿ ಘಟಕದಲ್ಲಿ ವಿದ್ಯಾ ನಿಧಿ ವಿತರಣೆ ಹಾಗೂ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ

ಯುವವಾಹಿನಿ( ರಿ ) ಉಡುಪಿ ಘಟಕದಲ್ಲಿ ವಿದ್ಯಾ ನಿಧಿ ವಿತರಣೆ ಹಾಗೂ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ

0Shares

ಯುವವಾಹಿನಿ (ರಿ ) ಉಡುಪಿ ಘಟಕದಲ್ಲಿ ವಿದ್ಯಾನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಘಟಕದ ಸಭಾಂಗಣದಲ್ಲಿ ಘಟಕದ ಅಧ್ಯಕ್ಷರು ಶ್ರೀಮತಿ ಅಮಿತಾಂಜಲಿ ಕಿರಣ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 29/09/2024 ರಂದು ಜರಗಿತು. ಮುಖ್ಯ ಅತಿಥಿಗಳಾಗಿ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕರು ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿತು ಸಮಾಜದಲ್ಲಿ ಉನ್ನತಸ್ಥಾನ ಪಡೆದು ಮುಂದಿನ ದಿನಗಳಲ್ಲಿ ಸಂಘಟನೆಗಳೊಂದಿಗೆ ಬೆರೆತು ಸಮಾಜಮುಖಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸುಮಾರು ಹನ್ನೊಂದು ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಮಾಡಲಾಯಿತು. ಹಾಗೂ ನಾಲ್ಕು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದಾನಿಗಳಾದ ಶ್ರೀ ಸುರೇಂದ್ರ ಕೋಟ್ಯಾನ್ ಹಾಗೂ ವಿಠ್ಠಲ್ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು. ಶ್ರೀಯುತ ಅಮಿತ್ ಮಟ್ಟು ಇವರು ಸುಮಾರು 58 ಕೆಜಿ ನಟ್ ಬಳಸಿ ಅಧಿಯೋಗಿ ಶಿವನ ಪ್ರತಿಮೆ ರಚಿಸಿ ಇಂಟರ್ರ್ನ್ಯಾಷನಲ್ ಬುಕ್ ಒಫ್ ರೆಕಾರ್ಡ್ ಮಾಡಿರುವ ಬಗ್ಗೆ ಅವರನ್ನು ಸನ್ಮಾನನಿಸಲಾಯಿತು.ಉಪಾಧ್ಯಕ್ಷರು ದಯಾನಂದ ಉಗ್ಗೇಲ್ ಬೆಟ್ಟು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರು ಮಹಾಬಲ ಅಮೀನ್ ರವರು ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಸುಪ್ರೀತ್ ಸುವರ್ಣ ಧನ್ಯವಾದಗಳನ್ನು ನೀಡಿದರು. ಗೌರವ ಸಲಹೆಗಾರರು ಶಂಕರ್ ಪೂಜಾರಿ ದ್ವಾರಕ,ಮಹಿಳಾ ಸಂಚಾಲಕರು ಕುಮಾರಿ ಶ್ರೀಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಪ್ರಜ್ಞಾಶ್ರಿ ಹಾಗೂ ಮಹೇಶ್ ಮಲ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now