ಭಾರತ ಸರಕಾರದ ನೋಟರಿ ಆಗಿ ಅಡ್ವಕೇಟ್ ಭಂಡಾರಿ ನೇಮಕ

ಭಾರತ ಸರಕಾರದ ನೋಟರಿ ಆಗಿ ಅಡ್ವಕೇಟ್ ಭಂಡಾರಿ ನೇಮಕ

0Shares

ಮುಂಬಯಿ (ಆರ್‌ಬಿಐ), ಎ.30: ಸುಮಾರು ಮೂರುವರೆ ದಶಕಗಳಿಂದ ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ರಿಮಿನಲ್ ಅಡ್ವಕೇಟ್ ಆಗಿ ಸೇವಾ ನಿರತ ಅಡ್ವಕೇಟ್ ಶೇಖರ್ ಎಸ್.ಭಂಡಾರಿ ಅವರ ಗುರುತರ ಸೇವೆಯನ್ನು ಗುರುತಿಸಿ ಭಾರತ ಸರಕಾರ ಅವರನ್ನು ನೋಟರಿ ಆಗಿ ನೇಮಿಸಿದೆ.

ಉಡುಪಿ ತಾಲೂಕು ಪಡುಬಿದ್ರಿ ಮೂಲತಃ ವಕೀಲ ಶೇಖರ್ ಭಂಡಾರಿ ಅವರು ವಿಜಯ ಕಾಲೇಜ್ ಮುಲ್ಕಿಯ ಅಲ್ಲಿ 1988ರಲ್ಲಿ ಬಿಕಾಂ ಪದವಿ ಪೂರೈಸಿ ಮಹಾರಾಷ್ಟ್ರದ ಕಲ್ಯಾಣ್‌ಗೆ ಬಂದು ನೆಲೆಸಿದರು.

ಆ ಬಳಿಕ ಅಂಧೇರಿಯಲ್ಲಿ ಖಾಸಗಿ ರಫ್ತು ಕಂಪೆನಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕೆಲಸದ ಜತೆಗೆ 1989ರಲ್ಲಿ ಥಾಣೆ ಲಾ ಕಾಲೇಜ್‌ನಲ್ಲಿ ಎಲ್‌ಎಲ್‌ಬಿ ವ್ಯಾಸಂಗದೊಂದಿಗೆ ಕಾನೂನು ಪದವಿಧರರಾದರು. ಬಳಿಕ ಎಲ್‌ಎಲ್‌ಎಂ ಪರಿಣತರಾಗಿ ಬಾಂಬೇ ಹೈಕೋರ್ಟ್‌ನಲ್ಲಿ ತಮ್ಮ ವಕೀಲವೃತ್ತಿ ಆರಂಭಿಸಿದರು. ಪ್ರಸ್ತುತ ಬಾಂಬೇ ಹೈಕೋರ್ಟ್ ಸಿಟಿ ಸಿವಿಲ್ ಹಾಗೂ ಸೆಶನ್ಸ್ ಕೋರ್ಟ್‌ನಲ್ಲಿ ನುರಿತ ಮತ್ತು ಪ್ರತಿಷ್ಠಿತ ವಕೀಲರಾಗಿ ಗುರುತಿಸಿ ಕೊಂಡಿದ್ದಾರೆ.

ವೃತ್ತಿಯ ಜತೆಗೆ ಸಮಾಜಹಿತ ಸೇವೆಯಲ್ಲಿ ತೊಡಗಿಸಿಕೊಂಡು ಸ್ವಸಮಾಜ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷರಾಗಿ, ಸದ್ಯ ಸಮಿತಿಯ ಕಾನೂನು ಸಲಹೆಗಾರರಾಗಿ ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿs ಸಂಘದ ಮುಂಬಯಿ ಘಟಕ ದ ಉಪಾಧ್ಯಕ್ಷ ಆಗಿ ಮತ್ತು ಭಾಂಡೂಪ್‌ನ ಭಟ್ಟಿಪಾಡ ಶನೀಶ್ವರ ಮಂದಿರ ಇದರ ಕಾನೂನು ಸಲಹೆಗಾರರಾಗಿ ಸೇವಾ ನಿರತರಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now