
ಮುಂಬೈ, (ಆರ್ಬಿಐ): ಬೃಹನ್ಮುಂಬೈನ ಹಿರಿಯ ಹೋಟೆಲ್ ಉದ್ಯಮಿ, ರಾಮಕೃಷ್ಣ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾದ ಸುಬ್ಬಯ್ಯ ವಿ. ಶೆಟ್ಟಿ (92) ಅವರು ವಯೋಸಹಜ ಕಾಯಿಲೆಗಳಿಂದ ತಮ್ಮ ನಿವಾಸ ಗಂಗಾ ಭವನ ಸೊಸೈಟಿ, ರಾಮಕೃಷ್ಣ ಬಂಗಲೆ, ವರ್ಸೋವಾ, ಜೆ.ಪಿ. ರಸ್ತೆ, ಅಂಧೇರಿಯಲ್ಲಿ ನಿಧನರಾದರು
ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಬೋಳಾದವರಾದ ಅವರು, ನಂದಲಿಕೆ ಶ್ರೀಮಠದ ನಿವಾಸಿಯಾಗಿದ್ದರು ಮತ್ತು ಸುಮಾರು ಆರು ದಶಕಗಳ ಹಿಂದೆ ಬೃಹನ್ಮುಂಬೈನಲ್ಲಿ ಹಿರಿಯ ಹೋಟೆಲ್ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದರು.
ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುಬ್ಬಯ್ಯ ಶೆಟ್ಟಿಯವರ ಅಂತಿಮ ವಿಧಿವಿಧಾನಗಳು ಅಂಧೇರಿ ಪೂರ್ವದ ಚಕಲಾ ಸ್ಮಶಾನದಲ್ಲಿ ನಡೆಯಲಿವೆ. ನೂರಾರು ಗಣ್ಯರು ಮತ್ತು ಅನೇಕ ಸಂಘಟನೆಗಳು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























