
ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ಜರಗುವ ದ್ವಾರಕೋತ್ಸವ-2025 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.05ರಂದು ಪುತ್ತೂರಿನ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ಜರಗಿತು.
ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಗೋಪಾಲಕೃಷ್ಣ ಭಟ್ ಅವರ ಕನಸಿನ ಕೂಸು ದ್ವಾರಕ ಸಂಸ್ಥೆ ಎಂದರು. ಹಂತ ಹಂತವಾಗಿ ಪರಿಶ್ರಮ ಪಟ್ಟು ದ್ವಾರಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು ಎಂದರು.
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇದರ ಸಂಚಾಲಕ ಗಣರಾಜ್ ಕುಂಬ್ಳೆ ಶುಭಹಾರೈಸಿದರು.
ವೇದಿಕೆಯಲ್ಲಿ ಗೋಪಾಲಕೃಷ್ಣ ಭಟ್ ದ್ವಾರಕ ಕಾರ್ಪೊರೇಟ್ ಪ್ರೈ ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್,ದ್ವಾರಕಾ ಕಾರ್ಪೊರೇಟ್ ಪ್ರೈ ಲಿ ನಿರ್ದೇಶಕರು ಮತ್ತು ದ್ವಾರಕಾ ಪ್ರತಿಷ್ಠಾನ ಕಾರ್ಯದರ್ಶಿಗಳಾದ ಅಮೃತ ಕೃಷ್ಣ, ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಎನ್ ಉಪಸ್ಥಿತರಿದ್ದರು.
ದುರ್ಗಾ ಗಣೇಶ್ ನಿರೂಪಣೆ ಮತ್ತು ಸ್ವಾಗತ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























