




ಉಡುಪಿ, 23 ಜನವರಿ 2025: ರಜತ ಸಂಭ್ರಮದಲ್ಲಿರುವ ಯವ ವಿಚಾರ ವೇದಿಕೆ ಕೊಳಲಗಿರಿ ವತಿಯಿಂದ ಆಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮಣಿಪಾಲ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನಿ ರಮೇಶ್ ಕರ್ಕೇರಾರವರ ಜನುಮದಿನದ ಪ್ರಯುಕ್ತ ರಕ್ತದಾನ ಕಾರ್ಯಕ್ರಮ ನಡೆಯಿತು. ರಮೇಶ ಕರ್ಕೇರ ಮತ್ತವರ ಸ್ನೇಹಿತರು, ಸಂಘಸಂಸ್ಥೆಗಳ ಜೊತೆಗೂಡಿಕೊಂಡು 35 ಯುನಿಟ್ ರಕ್ತದಾನ ಮಾಡಿದರು… ಸಂಜೆ ಯುವ ವಿಚಾರ ವೇದಿಕೆಯಲ್ಲಿ ನಡೆದ ರಕ್ತದಾನಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಹೇರಾಡಿ ಶ್ರೀಕೃಷ್ಣ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಮಾಲಕರಾದ ಶ್ರೀ ರಾಜು ಪೂಜಾರಿಯವರು ಮಾತನಾಡುತ್ತಾ ರೋಗಿಗಳ ಪಾಲಿಗೆ ಭಗವಂತನ ಸ್ವರೂಪವಾಗಿ ಬರುವವರು ರಕ್ತದಾನಿಗಳು.. ಅವರೆಂದೂ ಪ್ರತಿಫಲ ಅಪೇಕ್ಷಿಸುವುದಿಲ್ಲ. ಸದಾ ತೆರೆಯ ಮರೆಯಲ್ಲಿರುವವರು ಅವರನ್ನು ಕರೆದು ಗುರುತಿಸಿ ಗೌರವಿಸುವುದು ಶ್ರೇಷ್ಠ ಕೈಂಕರ್ಯವೆಂದರು.




ರಕ್ತದಾನಿಗಳಾದ ರಮೇಶ್ ಕರ್ಕೇರಾ ಮಾತನಾಡುತ್ತಾ ಜನ್ಮದಿನದಂದು ರಕ್ತದಾನ ಮಾಡುವುದರಿಂದ ಇನ್ನಷ್ಟು ಜನರಿಗೆ ಇದು ಪ್ರೇರಣೆಯಾಗಬೇಕು, ನನ್ನ ಬದುಕು ಇನ್ನೊಬ್ಬರಿಗೆ ಬೆಳಕಾಗಬೇಕು ಎನ್ನುವ ಹಂಬಲ ನಮ್ಮದು, ನನ್ನೊಂದಿಗೆ ಪ್ರತೀವರ್ಷ ರಕ್ತದಾನ ನೀಡುವ ಯುವ ವಿಚಾರ ವೇದಿಕೆಯ ಗೆಳೆಯರಿಗೆ ಧನ್ಯವಾದ ತಿಳಿಸಿ , ನಿರಂತರ ರಕ್ತದಾನ ಮಾಡುವ ಚಂದ್ರಕಾಂತ್ ಲಕ್ಷ್ಮೀನಗರ ಹಾಗೂ ಹದಿನೈದು ಮಂದಿ ರಕ್ತದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಯುವ ವಿಚಾರ ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಸದಾಶಿವ್ ಉಪಸ್ಥಿತರಿದ್ದರು.. ಶಕುಂತಳ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡು ಕೋಶಾಧಿಕಾರಿ ಅಶೋಕ್ ಸ್ವಾಗತಿಸಿ, ಶಾಂತ ಸೆಲ್ವಿ ರಾಜ್ ವಂದನಾರ್ಪಣೆಗೈದರು.. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು..



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























