ಗಾಣಿಗ ಸಮಾಜ ಮುಂಬಯಿ (ರಿ.) ವಾರ್ಷಿಕ ಮಹಾಸಭೆ

ಗಾಣಿಗ ಸಮಾಜ ಮುಂಬಯಿ (ರಿ.) ವಾರ್ಷಿಕ ಮಹಾಸಭೆ

0Shares

ಗಾಣಿಗ ಸಮಾಜ ಮುಂಬಯಿ (ರಿ.) ವಾರ್ಷಿಕ ಮಹಾಸಭೆ
ನೂತನ ಆಡಳಿತ ಮಂಡಳಿಗೆ ಪದಾಧಿಕರಿಗಳ ಆಯ್ಕೆ

ಮುಂಬಯಿ, ಜ.15: ಗಾಣಿಗ ಸಮಾಜ ಮುಂಬಯಿ (ರಿ.) ತನ್ನ ವಾರ್ಷಿಕ ಮಹಾಸಭೆಯನ್ನು ಕಳೆದ ಆದಿತ್ಯವಾರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಆಯೋಜಿಸಿತ್ತು. ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಅಧ್ಯಕ್ಷತೆಯಲ್ಲಿ ನಡೆಸಲಾದ ವಾರ್ಷಿಕ ಮಹಾಸಭೆಯಲ್ಲಿ ಪ್ರಸಕ್ತ 2025-2027 ಸಾಲಿನ ನೂತನ ಆಡಳಿತ ಮಂಡಳಿಗೆ ಪದಾಧಿಕರಿಗಳ ಆಯ್ಕೆ ನಡೆಸಲಾಯಿತು. ನೂತನ ಅಧ್ಯಕ್ಷ ಆಗಿ ವಿಜಯೇಂದ್ರ ಗಾಣಿಗ, ಕಾರ್ಯದರ್ಶಿ ಆಗಿ ದಿನೇಶ್ ಗಾಣಿಗ ಆಯ್ಕೆಗೊಳಿಸಲಾಗಿದ್ದು ಖಜಾಂಚಿಯಾಗಿ ಸದಾನಂದ ಕಲ್ಯಾಣಪುರ್ ಪುನರಾಯ್ಕೆ ಗೊಂಡರು.

ಉಪಾಧ್ಯಕ್ಷರುಗಳಾಗಿ ಗೋಪಾಲಕೃಷ್ಣ ಗಾಣಿಗ (4ಉ) ಮತ್ತು ಮಾಧವ ಗಾಣಿಗ (ಪನ್ವೆಲ್), ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ವೀಣಾ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ಆಗಿ ರಮೇಶ್ ಗಾಣಿಗ ಆಯ್ಕೆಗೊಂಡರು ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಆಗಿ ಗಣೇಶ್ ಕುತ್ಪಾಡಿ ಪುನರಾಯ್ಕೆ ಗೊಂಡರು.

ಇತರ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿನಾಯಕ್ ಭಟ್ಕಳ್, ಗಂಗಾಧರ್ ಎನ್.ಗಾಣಿಗ, ದಿನೇಶ್ ಎನ್.ರಾವ್, ನಾಗರಾಜ್ ಎಂ.ಗಾಣಿಗ, ನರೇಂದ್ರ ರಾವ್, ಆರತಿ ಗಾಣಿಗ, ಮಂಜುಳಾ ವಿ.ಗಾಣಿಗ, ವೀಣಾ ಡಿ.ಗಾಣಿಗ, ರಚನಾ ವಿ.ಭಟ್ಕಳ್ ಆಯ್ಕೆಗೊಂಡರು.

ವಿಶೇಷವಾಗಿ ಸಮಾಜದ ಹಿರಿಯ ಕೆಲವು ಸದಸ್ಯರುಗಳಾದ ಕುತ್ಪಾಡಿ ರಾಮಚಂದ್ರ ಗಾಣಿಗ, ಜಗನ್ನಾಥ್ ಎಂ. ಗಾಣಿಗ, ಬಿ.ವಿ.ರಾವ್, ಯು.ಬಾಲಚಂದ್ರ ಕಟ್ಪಾಡಿ, ರತ್ನಾಕರ್ ಎ.ಶೆಟ್ಟಿ, ಚಂದ್ರಶೇಖರ್ ಆರ್.ಗಾಣಿಗ, ಬಾಲಕೃಷ್ಣ ತೋನ್ಸೆ, ತಾರ ಭಟ್ಕಳ್ ಹಾಗೂ ಮಮತಾ ಡಿ.ರಾವ್ ಇವರು ಸಲಹಾ ಸಮಿತಿ ಸದಸ್ಯರುಗಳಾಗಿ ನೇಮಿಸಲ್ಪಟ್ಟರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now