
ಉಡುಪಿ, 4 ಜನವರಿ 2025: ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಎನ್ ರಮೇಶ್ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಹೂವಯ್ಯ ಸೇವೆಗಾರ್ ಇವರ ನೇತೃತ್ವದ ಎಲ್ಲಾ 13 ಸ್ಥಾನಗಳು ಪ್ರಚಂಡ ಬಹುಮತಗಳಿಂದ ಗೆಲುವು ಸಾಧಿಸಿದೆ.

ಎನ್ ರಮೇಶ್ ಶೆಟ್ಟಿ ಪರಮೇಶ್ವರ ಯು, ಗುಣಾಕರ ನಾಯ್ಕ ಇವರು ಅವಿರೋಧವಾಗಿ ಆಯ್ಕೆಗೊಂಡು ಉಳಿದ ಹತ್ತು ಈ ಕೆಳಗಿನ ಸ್ಪರ್ಧಿಗಳು ಪ್ರಚಂಡ ಬಹುಮತದಿಂದ ದಾಖಲೆಯ ಮತಪಡೆದು ಗೆಲುವು ಸಾಧಿಸಿದ್ದಾರೆ.
ಯು.ಕೃಷ್ಣಪ್ಪ ಪೂಜಾರಿ, ಹೂವಯ್ಯ ಸೇವೆಗಾರ್, ದೋಗು ಪೂಜಾರಿ,
ಕರುಣಾಕರ ಪೂಜಾರಿ, ಜಯಕರ ಆಚಾರ್ಯ, ಸುರೇಶ್ ಸುವರ್ಣ, ಪ್ರೇಮಾ ಲೂವಿಸ್, ವಿದ್ಯಾ ಜಯರಾಮ ಶೆಟ್ಟಿ, ಪ್ರಫುಲ್ ಚಂದ್ರ ಮತ್ತು ರಮೇಶ್ ಕರ್ಕೇರಾ ಆಯ್ಕೆಗೊಂಡಿರುತ್ತಾರೆ.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಉಡುಪಿ ಜಿಲ್ಲೆಯ ಕೆ.ಆರ್ ರೋಹಿತ್ ಇವರು ಚುನಾವಣಾ ನಿರ್ವಾಚನಾಧಿಕಾರಿಯವರಾಗಿ ಚುನಾವಣೆ ವಿದ್ಯುಕ್ತವಾಗಿ ನಡೆಸಿ ಕೊಟ್ಟಿರುತ್ತಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ ಮಾಧ್ಯಮ ಮತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























