ಮಾನಸಿಕ ಅಸ್ವಸ್ಥನ ರಕ್ಷಣೆ: ಸೂಚನೆ.

ಮಾನಸಿಕ ಅಸ್ವಸ್ಥನ ರಕ್ಷಣೆ: ಸೂಚನೆ.

0Shares

ಉಡುಪಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಕಳೆದೆರಡು ದಿನಗಳಿಂದ ಆಹಾರವನ್ನು ಸೇವಿಸದೆ ಇದ್ದವನನ್ನು ವಿಶು ಶೆಟ್ಟಿಯವರು ರಕ್ಷಿಸಿ ಕೊಳಲಗಿರಿಯ ಹೋಂ ಡಾಕ್ಟರ್ ಫೌಂಡೇಶನ್ ನ ಆಶ್ರಮ ಸ್ವರ್ಗದಲ್ಲಿ ದಾಖಲಿಸಿದ್ದಾರೆ.

ಯುವಕ ವಿನೋದ್ ಮೇಸ್ತ(29) ಹೊನ್ನಾವರ ಮೂಲದವನಾಗಿದ್ದು ಮನೆಯವರಲ್ಲಿ ಕೋಪಗೊಂಡು ಮನೆ ಬಿಟ್ಟು ಬಂದಿದ್ದೇನೆ ಎಂಬ ಮಾಹಿತಿ ನೀಡಿದ್ದಾನೆ. ವಿಶು ಶೆಟ್ಟಿ ಮಾಹಿತಿಗೆ ಆಶ್ರಮದ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಸ್ಪಂದನೆ ನೀಡಿದ್ದಾರೆ. ಸಂಬಂಧಿಕರು ಸ್ವರ್ಗ ಆಶ್ರಮ ಸಂಪರ್ಕಿಸುವಂತೆ ಕೋರಲಾಗಿದೆ.

ರಕ್ಷಣಾ ಕಾರ್ಯದಲ್ಲಿ ರಾಮಚಂದ್ರ ಮಟಪಾಡಿ ಸಹಕರಿಸಿದ್ದಾರೆ.ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now