
ಕಲಾನಿಧಿ (ರಿ) ಸಾಂಸ್ಕೃತಿಕ ಕಲಾ ಪ್ರಾಕಾರಗಳ ಸಂಸ್ಥೆ , ಉಡುಪಿ ಇದರ ದಶಮಾನೋತ್ಸವದ ಅಂಗವಾಗಿ ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ನವಶಕ್ತಿ ವೇದಿಕೆಯಲ್ಲಿ ರಂಗ ನಟ ,ನಿರ್ದೇಶಕ ,ಯಕ್ಷಗಾನ ಕಲಾವಿದರಾದ ಶ್ರೀ ಯೋಗೀಶ್ ಕೊಳಲಗಿರಿ ಇವರಿಗೆ ರಂಗ ಸುಮ ನಿಧಿ ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿ ಹಾಗೂ ಶ್ರೀಮತಿ ಉಷಾರಮಾನಂದರು ನೀಡಿ ಗೌರವಿಸಿದರು. ಸನ್ಮಾನಿತರ ಪರಿಚಯವನ್ನು ವೈ. ಪ್ರಣಮ್ಯ ರಾವ್ ಮಾಡಿದರು. ಕಲಾನಿಧಿ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ಷೇತ್ರದ ಉಸ್ತುವಾರಿಯಾಗಿರುವ ಶ್ರೀಮತಿ ಕುಸುಮ ನಾಗರಾಜ್, ಕಲಾನಿಧಿಯ ಕಾರ್ಯದರ್ಶಿಯಾದ ರೋಹಿತ್ ಮಲ್ಪೆ ಹಾಗೂ ಶ್ರೀಮತಿ ಸರೋಜಾ ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now