ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮತ

ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮತ

0Shares

ಬೆಂಗಳೂರು: ಆರೋಗ್ಯಕರ ಕುಟುಂಬಗಳು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುತ್ತವೆ. ಆರೋಗ್ಯಕರ ರಾಷ್ಟ್ರವು ಶಕ್ತಿಶಾಲಿ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ವಿದ್ಯಾಭ್ಯಾಸದ ಒತ್ತಡ ಎದುರಿಸುವ ಬಾಲಕಿಯಿಂದ ಹಿಡಿದು ಕೆಲಸ ಮತ್ತು ಮನೆ ಎರಡನ್ನೂ ಸಮತೋಲನಗೊಳಿಸುವ ಮಹಿಳೆಯವರೆಗೆ ಜೀವನ ಬದಲಾವಣೆಗಳನ್ನು ಎದುರಿಸುವ ತಾಯಿಯಿಂದ…ಏಕಾಂತವನ್ನು ಅನುಭವಿಸುವ ವೃದ್ಧೆಯವರೆಗೆ ಪ್ರತಿ ಹಂತವೂ ಹೊಸ ಸವಾಲುಗಳನ್ನು ತರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇವು ಕೇವಲ ಅಂಕಿ ಅಂಶಗಳಲ್ಲ… ಇವು ಜೀವಗಳು, ಕುಟುಂಬಗಳು, ಭವಿಷ್ಯಗಳು. ಇದನ್ನು ಒಂದೇ ಸಂಸ್ಥೆ ಪರಿಹರಿಸಲು ಸಾಧ್ಯವಿಲ್ಲ. ಒಂದು ಮನಸ್ಸನ್ನು ಬೆಂಬಲಿಸಲು ಒಂದು ಸಮಾಜ ಬೇಕು. ಸರ್ಕಾರಕ್ಕೆ ಜವಾಬ್ದಾರಿ ಇದೆ.

ಸಂಸ್ಥೆಗಳಿಗೆ ಜವಾಬ್ದಾರಿ ಇದೆ. ಸಮುದಾಯಗಳಿಗೆ ಜವಾಬ್ದಾರಿ ಇದೆ ಎಂದರು.

  • ಮಹಿಳೆಯರಿಗಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳು

ನಮ್ಮ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಹಣಕಾಸಿನ ವಿಚಾರದಲ್ಲಿ ಮಹಿಳೆ ಸದೃಢ ಆಗಬೇಕು ಎನ್ನುವ ಸಲುವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯನ್ನು ಹಾಕಲಾಗುತ್ತಿದೆ. ಜೊತೆಗೆ ಶಕ್ತಿ ಯೋಜನೆ ಮೂಲಕ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸಬಲೀಕರಣವೇ ನಮ್ಮ ಗುರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಈ ವೇಳೆ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ನೀರಜಾ ಬಿರ್ಲಾ, ನಿಮ್ಹಾನ್ಸ್ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ, ಮಾನಸಿಕ ತಜ್ಞರಾದ ಇಮೊನ್ ಮ್ಯಾಕ್ ಕ್ರೊರಿ, ಪೀಟರ್ ಫಾನಗೊಯಿ, ಡಾ.ಶಾಮ್ ಭಟ್, ಡುರು ಶಾ ಸೇರಿದಂತೆ ಹಲವು ಮಾನಸಿಕ ತಜ್ಞರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now