
ಉದ್ಯಾವರ :ಇತ್ತೀಚಿಗೆ ಅಕಸ್ಮಿಕವಾಗಿ ನಮ್ಮನ್ನಗಲಿದ , ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯ ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರು , ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು ಮಾಜಿ ಪಂಚಾಯತ್ ಸದಸ್ಯರು ,ಸಾಮಾಜಿಕ ಕಾರ್ಯಕರ್ತೆ ಹೆಲನ್ ಫೆರ್ನಾಂಡಿಸ್ ಅವರಿಗೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನುಡಿ ನಮನ ಕಾರ್ಯಕ್ರಮ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು .
ಸಂಸ್ಥೆಯ ಹಿರಿಯ ನಿರ್ದೇಶಕರಾದ ಚಂದ್ರಾವತಿ ಎಸ್ .ಭಂಡಾರಿ ಅವರು ಮೃತರ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.
ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಅಧ್ಯಕ್ಷ ಗಿರೀಶ್ ಗುಡ್ಡೆಯಂಗಂಡಿ, ಮಾಜಿ ಅಧ್ಯಕ್ಷರುಗಳಾದ ರಿಯಾಝ್ ಪಳ್ಳಿ ,,ಆಬಿದ್ ಆಲಿ , ಶೇಖರ ಕೆ. ಕೋಟ್ಯಾನ್, ಸದಸ್ಯರಾದ ಯು. ಸೀತಾರಾಮ್ , ಸುಧಾಕರ ಕುಮಾರ್ ನುಡಿನಮನ ಸಲ್ಲಿಸಿದರು .
ಈ ಸಂದರ್ಭದಲ್ಲಿ ನಿರ್ದೇಶಕರಾದ ಶರತ್ ಕುಮಾರ್, ಯು.ಪದ್ಮನಾಭ ಕಾಮತ್ , ಉಪಾಧ್ಯಕ್ಷರಾದ ಶ್ರೀಧರ ಮಾಬಿಯಾನ್ , ಕಾರ್ಯದರ್ಶಿ ಆಶಾವಾಸು, ಸಂಘಟನಾ ಕಾರ್ಯದರ್ಶಿಗಳಾದ ಯು.ಆರ್.ಚಂದ್ರಶೇಖರ್ , ಮಹಮ್ಮದ್ ಆಲಿ , ಸದಸ್ಯರಾದ ಸೋಮಶೇಖರ ಸುರತ್ಕಲ್ , ಸುಗಂಧಿ ಶೇಖರ್ , ಪುಷ್ಪಾ, ಸರಸ್ವತಿ ಮೆಂಡನ್, ವಿಶ್ವನಾಥ ಪೂಜಾರಿ , ಅಶೋಕ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮಾಜಿ ಅಧ್ಯಕ್ಷ ತಿಲಕರಾಜ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ಧನ್ಯವಾದ ಇತ್ತರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now