
ಸಮುದಾಯ ವೈದ್ಯಕೀಯ ವಿಭಾಗ, ದಂತ ವೈದ್ಯಕೀಯ ವಿಭಾಗ, ಕೆ ಎಮ್ ಸಿ ಮಣಿಪಾಲ , ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ (ಅಂದತ್ವ ನಿವಾರಣಾ ವಿಭಾಗ) ಜಿಲ್ಲಾಸ್ಪತ್ರೆ ಎನ್ ಸಿ ಡಿ ವಿಭಾಗ, ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ,ಕಿದಿಯೂರು ಉಪಕೇಂದ್ರ, ಇವರ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವು ಕಿದಿಯೂರು ಪಡುಕೆರೆ ಬಾಲಾಂಜನೇಯ ಪೂಜಾ ಕೇಂದ್ರದಲ್ಲಿ ನಡೆಯಿತು.

ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ , ಕನ್ನಡಕ ವಿತರಣೆ ಆರೋಗ್ಯ ಸ್ತನ ಹಾಗೂ ಗರ್ಭಕಂಟ ಕ್ಯಾನ್ಸರ್ ತಪಾಸಣೆ, ಮಧುಮೇಹ, ರಕ್ತದೊತ್ತಡ ಎಚ್ ಬಿ , ಇಸಿಜಿ, ದಂತ ತಪಾಸಣೆ, ಚರ್ಮರೋಗ ತಪಾಸಣೆ ಮಾಡಲಾಯಿತು.
ಪ್ರಸಾದ್ ನೇತ್ರಾಲಯದ ವೈದ್ಯಧಿಕಾರಿ ಡಾ ಕೃಷ್ಣಪ್ರಸಾದ್ ಅವರು ಶಿಬಿರವನ್ನು ಉದ್ಘಾಟಿಸಿದರು ಶಿಬಿರದಲ್ಲಿ ಭಾಗವಹಿಸಿದ 80 ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು ಗರ್ಭಕೋಶ ಕ್ಯಾನ್ಸರ್, ಗರ್ಭಕೋಶ ಕಾಯಿಲೆಗಳ ಬಗ್ಗೆ ತಪಾಸಣೆ ಮತ್ತು ಮಾಹಿತಿ ನೀಡಲಾಯಿತು.
ಸುಮಾರು 120 ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























