ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

0Shares

ಉಡುಪಿ ಜ. 4: ಶಾಲಾ ಮಕ್ಕಳು ಹಿರಿಯರು ಮಹಿಳೆಯರು ರೈಲ್ವೆ ಪ್ರಯಾಣಿಕರು ಇಂದ್ರಾಳಿ ರೈಲ್ವೆ ಸೇತುವೆ ರಸ್ತೆಗೆ ಹೋಗಲು ಇದೀಗ ಕಬ್ಬಿಣದ ಮೆಟ್ಟಿಲ ಏಣಿಯನ್ನು ದುರಂತ ತಪ್ಪಿಸುವ ಸಾಲುವಾಗಿ ವಿಶು ಶೆಟ್ಟಿ ಅಂಬಲಪಾಡಿ ನಿರ್ಮಿಸಿ ನೀಡಿದ ಘಟನೆ ನಡೆದಿದೆ.

ಕಳೆದ ಕೆಲವು ಸಮಯಗಳಿಂದ ಇಲ್ಲಿ ಪಾದಚಾರಿಗಳು ಬಹಳ ಪ್ರಯಾಸಪಟ್ಟು ಕಲ್ಲುಗಳ ಮೇಲೆ ಹತ್ತಿ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ಹತ್ತುತ್ತಿದ್ದರು. ಶಾಲಾ ಮಕ್ಕಳು ಪಾದಾಚಾರಿಗಳು ಬಹಳ ಪ್ರಾಯಾಸಪಟ್ಟು ಹತ್ತಲು ಹಾಗೂ ಇಳಿಯಲು ಶ್ರಮ ಪಡುತ್ತಿದ್ದು ಅಪಾಯಕ್ಕೆ ದಾರಿ ಮಾಡಿದಂತೆ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ದುರಂತ ಸಂಭವಿಸದಿರಲಿ ಎಂಬ ದೃಷ್ಟಿಯಿಂದ ವಿಶು ಶೆಟ್ಟಿ ಅಂಬಲಪಾಡಿ ₹16,500/- ವೆಚ್ಚದಲ್ಲಿ ಕಬ್ಬಿಣದ ಮೆಟ್ಟಿಲು ನಿರ್ಮಿಸಿಕೊಟ್ಟಿದ್ದಾರೆ

ಹಿರಿಯ ವೃದ್ಧರು ಮಹಿಳೆಯರು ಹತ್ತಲು ಹಾಗೂ ಇಳಿಯಲು ಇಲ್ಲಿ ಬಹಳ ಪ್ರಯಾಸ ಪಡುತ್ತಿದ್ದರು. ಸ್ವಲ್ಪ ಸಮತೋಲನ ತಪ್ಪಿದರೂ ದುರಂತ ಕಟ್ಟಿಟ್ಟ ಬುತ್ತಿ. ಪಾದಚಾರಿಗಳು ಎಲುಬು ಮುರಿತಕ್ಕೆ ಒಳಗಾಗುವ ಸಂಭವ ಜಾಸ್ತಿ. ಒಂದು ಸಣ್ಣ ಕೆಲಸದಿಂದ ದುರಂತ ತಪ್ಪಿಸುವ ಕೆಲಸ ಆಗುವಾಗ ದುರಂತಕ್ಕೆ ಎಡೆ ಮಾಡಿಕೊಡಬಾರದು. 16500/- ರೂ ಖರ್ಚಿನಲ್ಲಿ ಮೆಟ್ಟಿಲು ನಿರ್ಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೇರೆ ವ್ಯವಸ್ಥೆ ನಡೆದರೆ ಇದೀಗ ನಿರ್ಮಿಸಿದ ಮೆಟ್ಟಿಲು ಏಣಿಯನ್ನು ವಾಪಸು ನೀಡಿ ಜನಸಾಮಾನ್ಯರ ದುರಂತಕ್ಕೆ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ.

ವಿಶು ಶೆಟ್ಟಿ ಅಂಬಲಪಾಡಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now