ಸನ್ಮಾನದ 25000 ನೊಂದವರ ವೈದ್ಯಕೀಯ ನೆರವಿಗೆ

ಸನ್ಮಾನದ 25000 ನೊಂದವರ ವೈದ್ಯಕೀಯ ನೆರವಿಗೆ

0Shares

ಉಡುಪಿ.ಡಿ. 30 :- ಉಡುಪಿ ಪುತ್ತೂರಿನ ದಿವಂಗತ ಬೊಗ್ರಶೆಟ್ಟಿ ಅಕ್ಕಮ್ಮ ಶೆಟ್ಟಿ ಕುಟುಂಬದ ಆತ್ಮೀಯ ಸ್ನೇಹ ಸಮ್ಮಿಲನ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ವಿಶುಶೆಟ್ಟಿ ಅಂಬಲಪಾಡಿಯವರನ್ನು ಡಾ. ಮೋಹನ್ ಆಳ್ವ ಹಾಗೂ ಕುಟುಂಬದ ಹಿರಿಯರ ಉಪಸ್ಥಿತಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನದಲ್ಲಿ ರೂ 25,000 ಗೌರವಧನ ನೀಡಿದ್ದರು. ಈ ಗೌರವ ಧನವನ್ನು ವಿಶುಶೆಟ್ಟಿಯವರು ಪಣಿಯೂರು ರೂಪಶೆಟ್ಟಿಯವರ ಪತಿಯ ವೈದ್ಯಕೀಯ ವೆಚ್ಚಕ್ಕೆ ನೀಡಿ ಸ್ಪಂದನೆ ನೀಡಿದ್ದಾರೆ.

ಹಲವು ಸನ್ಮಾನ ಸ್ವೀಕರಿಸುವಾಗ ಕೆಲವು ಸನ್ಮಾನದಲ್ಕಿ ಗೌರವಧನ ನೀಡುತ್ತಾರೆ. ಈ ವರೆಗೆ ನೀಡಿದ ಎಲ್ಲಾ ಗೌರವ ಧನವನ್ನು ವಿಶುಶೆಟ್ಟಿಯವರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೀಡಿದ್ದು, ಸಮಾಜ ಸೇವೆಗೆ ನೀಡಿದ ಗೌರವ ಧನ ಸಮಾಜಕ್ಕೆ ಸಲ್ಲಬೇಕೆಂಬ ನಿಲುವು ವಿಶುಶೆಟ್ಟಿ ಅಂಬಲಪಾಡಿಯವರದ್ದಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now