
ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯು ಪ್ರಾರಂಭಗೊಂಡು 12 ವರ್ಷಗಳು ಸಂದವು. ಈ ಸಂಸ್ಥೆಯು ಕರಾವಳಿ ಭಾಗದ ಜಿಲ್ಲೆಯಾದ ಉಡುಪಿಯಲ್ಲಿ ಕಾರ್ಯವ್ಯಾಪ್ತಿಯನ್ನು ನಡೆಸುತ್ತಿದೆ. ಕ್ರೈಸ್ತ ಸಮುದಾಯದ ಎಲ್ಲಾ ವರ್ಗಗಳನ್ನು ( ರೋಮನ್ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್, ಆರ್ಥೋಡಾಕ್ಸ್ ಇನ್ನಿತರ ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ತರು, ವೃತ್ತಿಪರರು ಹಾಗೂ ಕೃಷಿಕರು ಸದಸ್ಯರಾಗಿರುತ್ತಾರೆ. ಕೇವಲ 30 ಜನ ಅಜೀವ ಸದಸ್ಯರಿಂದ ಪ್ರಾರಂಭಗೊಂಡು ಸಂಸ್ಥೆಯು ಇಂದು 181 ಸದಸ್ಯರನ್ನು ಹೊಂದಿದೆ.
ಅಕ್ಟೋಬರ್ 2 ರಂದು ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಜನ ಬೋರ್ಡ್ ಮೆಂಬರ್ಸ್ ಆಯ್ಕೆಯಾಗಿದ್ದರು. ತಾ! 15-10-2025 ರಂದು ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶ್ರೀ ಜೆರಿ ವಿನ್ಸೆಂಟ್ ಡಾಯಸ್, ಅಧ್ಯಕ್ಷರಾಗಿ ಶ್ರೀ ಅಲ್ವಿನ್ ಕ್ವಾಡ್ರಸ್- ಕೋಟ, ಉಪಾಧ್ಯಕ್ಷರಾಗಿ ಶ್ರೀ ಜಿತೇಂದ್ರ ಫುರ್ಟಾಡೊ – ಫಲಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಿಲ್ಸನ್ ಡಿಸೋಜ ಶಿರ್ವ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಜೀವನ್ ಸಾಲಿನ್ಸ್- ಕುಂದಾಪುರ, ಕೋಶಾಧಿಕಾರಿಯಾಗಿ ಶ್ರೀ ಮೆಕ್ಸಿಮ್ ಸ್ಟೀಫನ್ ಸಲ್ಧಾನ ,ಉಡುಪಿ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿ ಶ್ರೀ ಸಂತೋಷ್ ಡಿಸಿಲ್ವ- ಕಾರ್ಕಳ ಚುನಾಯಿತರಾದರು.
ನಿರ್ದೇಶಕ ಮಂಡಳಿ | ಶ್ರೀ ಲುವಿಸ್ ಲೋಬೊ – ಕಲ್ಮಾಡಿ, ಶ್ರೀ ಗ್ರೆಗೊರಿ ಮಿನೇಜಸ್ – ಬೆಳ್ಮಣ್, ಶ್ರೀ ವಾಲ್ಟರ್ ಸಲ್ಧಾನ- ಉಡುಪಿ, ಶ್ರೀ ಡೆರಿಕ್ ಡಿಸೋಜ -ಸಾಸ್ತಾನ, ಶ್ರೀ ಡಾಲ್ಫಿ ಮಸ್ಕರೇನ್ಹಸ್ – ಉಡುಪಿ, ಶ್ರೀ ಜೆರಾಲ್ಡ್ ಫೆರ್ನಾಂಡಿಸ್- ಮೂಡುಬೆಳ್ಳೆ, ಶ್ರೀ ಜೋನ್ಸನ್ ಅಲ್ಮೇಡ- ಕುಂದಾಪುರ, ಶ್ರೀ ಪ್ರಕಾಶ್ ಪಿಂಟೊ- ಕಾರ್ಕಳ, ಶ್ರೀ ಪ್ರಶಾಂತ್ ಜತ್ತನ್ -ಕಟಪಾಡಿ, ಶ್ರೀ ಫ್ರಾನ್ಸಿಸ್ ಡಿಸೋಜ -ಪಲಿಮಾರ್, ಶ್ರೀ ಟೆರೆನ್ಸ್ ಸುವಾರಿಸ್- ಉಡುಪಿ, ಶ್ರೀ ಆಲಾನ್ ವಾಸ್ -ಬ್ರಹ್ಮಾವರ
ಸಮಾರಂಭವು ಕುಟುಂಬ ಸಮ್ಮಿಲನದೊಂದಿಗೆ ಸಮಾಷ್ಟ್ರಗೊಂಡಿತ್ತು.


ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now