ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಶ್ರೀ ಎಂ ವಸಂತ್ ಕಿಣಿ ಆಯ್ಕೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಶ್ರೀ ಎಂ ವಸಂತ್ ಕಿಣಿ ಆಯ್ಕೆ

0Shares

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 33ನೇ ವಾರ್ಷಿಕ ಮಹಾಸಭೆಯು ತಾ .20-09-2025 ರಂದು ಅಧ್ಯಕ್ಷರಾದ ಶ್ರೀ ಹರೀಶ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ಸಭಾಂಗಣದಲ್ಲಿ ಜರುಗಿತು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಕೆ ಪ್ರಶಾಂತ್ ಬಾಳಿಗಾ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಶ್ರೀ ಎಂ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು.

ಶ್ರೀ ಎಂ ವಸಂತ್ ಕಿಣಿ , ಆನಂದ್ ಪಾಲಿಮರ್ಸ್ ಹಿರಿಯಡ್ಕ ಇವರು 2025-26 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ, ಶ್ರೀ ಎಂ ವಲ್ಲಭ್ ಭಟ್, ಶ್ರೀ ಹೃಷಿಕೇಶ್ ಹೆಗ್ಡೆ, ಹಾಗೂ ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ ಕಾರ್ಯದರ್ಶಿಯಾಗಿ ಕೆ ರಂಜನ್ ಕಲ್ಕೂರ , ಕೋಶಾಧಿಕಾರಿಯಾಗಿ ಶ್ರೀ ಆನಂದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಕೆ. ಮಹೇಶ್ ಉಡುಪ, ಶ್ರೀ ಸಮೀರ್ ಮೊಹಮ್ಮದ್ ಹಾಗೂ ಶ್ರೀ ಸುರೇಂದ್ರ ನಾಯಕ್ ಅವರು ಅವಿರೋಧವಾಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹರೀಶ್ ಕುಂದರ್ ರವರು, ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಶ್ರೀ ರಂಜಾನ್ ಕಲ್ಕೂರ ರವರು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಪಿಂಟೋ ರವರ ಸುಧೀರ್ಘ ಸೇವೆಗಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ನುಡಿಯಲ್ಲಿ ಸಂಘವು ನಡೆದು ಬಂದ ಹಾದಿಯ ಬಗ್ಗೆ ಹಾಗೂ ಸಂಘದ ಪದಾಧಿಕಾರಿಗಳ ಶುಭಾಂಶನೆಗೈದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಎಂ. ವಿಶ್ವನಾಥ ಭಟ್ , ಶ್ರೀ ಜಾನ್ ಡಿ ಸಿಲ್ವಾ ಹಾಗೂ ಶ್ರೀ ಎಂ ಚಿತ್ತರಂಜನ್ ಭಟ್ ರವರು ಶುಭಾಂಶನೆಗೈದರು. ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಂ ಗಣೇಶ್ ಕಿಣಿ ಹಾಗೂ ಸದಸ್ಯರಾದ ಶ್ರೀ ಎಂ ವಾಮನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now