ಬದಲಾವಣೆಯ ಕಾಲದಲ್ಲಿ ಶಿಕ್ಷಕ ಬದಲಾಗಬೇಕು – ರಾಜೇಂದ್ರ ಭಟ್

ಬದಲಾವಣೆಯ ಕಾಲದಲ್ಲಿ ಶಿಕ್ಷಕ ಬದಲಾಗಬೇಕು – ರಾಜೇಂದ್ರ ಭಟ್

0Shares

ಕಾಲ ಬದಲಾಗಿದೆ, ಆಧುನೀಕರಣ ಹೆಚ್ಚಾಗಿದೆ. ಈಗಿನ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ ಗುರುಭಕ್ತಿ ಕಡಿಮೆಯಾಗಿದೆ ಎಂಬುವುದು ಶಿಕ್ಷಕರ ಇತ್ತೀಚಿಗಿನ ಗೋಳು ಹೆಚ್ಚುತ್ತಿದೆ. ಬದಲಾವಣೆಯ ಕಾಲದಲ್ಲಿ ಶಿಕ್ಷಕರು ಕೂಪ ಮಂಡೂಕನಂತಿರಬಾರದು, ಹರಿಯುವ ನೀರಾಗಬೇಕು. ಕೃತಕ ಬುದ್ಧಿಮತ್ತೆ, ದೃಶ್ಯಮಾಧ್ಯಮದ ಸದ್ಭಳಕೆ ಮಾಡಿ ಪ್ರಚಲಿತ ವಿದ್ಯಾಮಾನಗಳನ್ನು ಅನುಸರಿಸಿ ಪಾಠಗಳನ್ನು ರಸವತ್ತಾಗಿ ಮಾಡಬೇಕು. ಮೊದಲು ನಾವು ಬದಲಾಗಬೇಕು ಎಂದು ರಾಷ್ಟ್ರೀಯ ತರಬೇತುದಾರ ವಾಗ್ಮಿ ರಾಜೇಂದ್ರ ಭಟ್ ಹೇಳಿದರು.

ಅವರು ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರ ಪುನಶ್ಚೇತನ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುತ್ತಾ ಮಾತನಾಡಿದರು. ತರಬೇತಿ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿದ ಶಾಲಾ ಸಂಚಾಲಕ ವಂ| ಡಾ| ರೋಕ್ ಡಿ’ಸೋಜ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಕೇವಲ ಪಾಠ ಕೇಳಿ ವ್ಯಾಸಂಗ ಮಾಡುವುದಿಲ್ಲ ಬದಲಾಗಿ ನೋಡಿ ಕಲಿಯುತ್ತಾರೆ. ಶಿಕ್ಷಕರ ವರ್ತನೆ ಸಹದ್ಯೋಗಿಗಳ ನಡುವೆ ಇರುವ ಸ್ಪಂದನೆ ಗಮನಿಸುತ್ತಾರೆ. ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶಿಗಳಾಗುವ ಬದಲು ಆದರ್ಶರಾಗಬೇಕು ಎಂದು ಕರೆಕೊಟ್ಟರು.

ಶಾಲಾ ಮುಖ್ಯಶಿಕ್ಷಕಿ ಸಿ| ಆನ್ಸಿಲ್ಲಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಪರಿಚಯಿಸಿದರು. ಶಿಕ್ಷಕಿ ಪ್ರೆಸ್ಸಿಲ್ಲಾ ನಿರೂಪಿಸಿದರು. ನ್ಯಾನ್ಸಿ ಡಿಸೋಜ ಅಭಿಪ್ರಾಯ ಹಂಚಿಕೊಂಡರು. ಸುಜಾತ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now