
ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮೀ(88) ಅವರು ನಿಧನರಾಗಿದ್ದಾರೆ. ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ನೆಲೆಸಿದ್ದ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 16ರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪುತ್ರರಾದ ಜಾವಗಲ್ ಶ್ರೀನಾಥ್, ಜೆಸಿ ಶ್ರೀನಿವಾಸ್, ಪುತ್ರಿಯರಾದ ಜೆಸಿ ಶ್ರೀಲಕ್ಷ್ಮೀ ಮತ್ತು ಜೆಸಿ ಶ್ರೀಲತಾ ಇದ್ದಾರೆ.
ಅವರ ಪತಿ ಚಂದ್ರಶೇಖರ್ ಅವರು 2018ರಲ್ಲಿ ನಿಧನರಾಗಿದ್ದರು. ಶ್ರೀನಾಥ್ ಅವರ ತಂದೆ ಚಂದ್ರಶೇಖರ್ ಅವರು ಉದ್ಯಮಿಯಾಗಿದ್ದರೂ ಕ್ರೀಡೆಗಳಲ್ಲಿ ಕ್ರಿಯಾಶೀಲಕಾಗಿದ್ದರು. ಫುಟ್ಬಾಲ್ ಕ್ರೀಡೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಅಥ್ಯುತ್ತಮ ಬ್ಯಾಡ್ಮಿಂಟನ್ ಪಟುವೂ ಆಗಿದ್ದರು. ಗೃಹಣಿಯಾಗಿದ್ದ ಅವರ ಪತ್ನಿ ಭಾಗ್ಯಲಕ್ಷ್ಮೀ ಪತಿಯ ಉಧ್ಯಮ ಮತ್ತು ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದರು. ಶ್ರೀನಾಥ್ ಅವರ ತಾಯಿಯ ನಿಧನ ಅವರ ಕಟುಂಬ ಮತ್ತು ಕ್ರೀಡಾವಲಯದಲ್ಲಿ ಅಪಾರ ದುಃಖಕ್ಕೆ ಕಾರಣವಾಗಿದ್ದು ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now