
ದಿನಾಂಕ:-24/09/2025 ರ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ IQAC ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಯುವಜನರ ಭಾಗವಹಿಸುವಿಕೆ ಎಂಬ ಕಾರ್ಯಕ್ರಮವನ್ನು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ರಾಬರ್ಟ್ ರೋಡ್ರಿಗಸ್ ಜೆ .ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಯಾನಂದ ಡಿ ಕೀದಿಯೂರು , ನಿವೃತ್ತ ರಾಜಶಾಸ್ತ್ರ ಉಪನ್ಯಾಸಕರು ಪದವಿ ಪೂರ್ವ ಕಾಲೇಜು ಉಡುಪಿಕಾಲೇಜು,ಇವರು ಆಗಮಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ ,ಉಪನ್ಯಾಸಕಿ ಶ್ರೀಮತಿ ದೀಪಾ ಕೋಟ್ಯಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿಶು ಕುಂದರ್ ಸ್ವಾಗತಿಸಿ , ವ್ಯಕ್ತಿ ಪರಿಚಯವನ್ನು ವಿಘ್ನೇಶ್ ಪೈ,ಧನ್ಯವಾದವನ್ನು ಚಿನ್ಮಯ ಹಾಗು ನಿರೂಪಣೆಯನ್ನು ತುಷಾರ್ ಇವರು ನೆರವೇರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now