
ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ಗುಮಾಸ್ತ/ಜೂನಿಯರ್ ಮ್ಯಾನೇಜರ್ ಆದ 1ನೇ ಆರೋಪಿ ಹರೀಶ್ ಕುಲಾಲ್ ಹಾಗೂ 2ನೇ ಆರೋಪಿ ಮ್ಯಾನೇಜರ್ ಸುರೇಶ್ ಭಟ್ ಇವರುಗಳು ಸಂಘಕ್ಕೆ 1 ಕೋಟಿ 70 ಲಕ್ಷ ಹಣ ವಂಚಿಸಿದ ಬಗ್ಗೆ ದಾಖಲಾದ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 205/2025 ಕಲಂ: 318(3)(4) 112 ಜೊತೆಗೆ 3(5) ಬಿ.ಎನ್.ಎಸ್. 2023ರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹರೀಶ್ ಕುಲಾಲ್ (32), ತಂದೆ ಬಾಬು ಕುಲಾಲ್ ವಾಸ: ಹವರಾಲು ಕಾವಡಿ ಗ್ರಾಮ ಮತ್ತು ಅಂಚೆ ಬ್ರಹ್ಮಾವರ ತಾಲೂಕು ಉಡುಪಿ ಎಂಬಾತನನ್ನು ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್. ಪಿ.ಎಸ್.ಐ. ( ಕಾ.&ಸು.) ಮಾಂತೇಶ್ ಜಾಭಗೌಡ, ಪಿ.ಎಸ್.ಐ. ( ತನಿಖೆ ) ಹಾಗೂ ಠಾಣಾ ಸಿಬ್ಬಂದಿಗಳಾದ ಸಿಹೆಚ್ಸಿ ಕೃಷ್ಣಶೇರೆಗಾರ, ಸಿಹೆಚ್ಸಿ ಶ್ರೀಧರ್, ಪಿಸಿ ಶರತ್ ಇವರುಗಳು ತಂಡ ದಸ್ತಗಿರಿ ಗೊಳಿಸಿರುತ್ತಾರೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now