
ಶಿರ್ವ- ಪಂಜಿಮಾರು- ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ದಿನಾಂಕ: 11-09-2025 ರಂದು ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ್ದು ಸದರಿ ರಸ್ತೆ ಇನ್ನೂ ಕೂಡ ದುರಸ್ತಿಯಾಗದೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಇಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜ ರವರ ನೇತೃತ್ವದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ನಿಯೋಗವು ಇಂದು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರನ್ನು ಭೇಟಿ ಮಾಡಿ ಅವರ ನಿರ್ದೇಶನದಂತೆ ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಎಸ್ ಬಿ ಅವರನ್ನು ಭೇಟಿ ಮಾಡಿ ಚರ್ಚಿಸಿತು… ಇಂಜಿನಿಯರ್ ರವರು ಸದ್ರಿ ರಸ್ತೆಯ ಕಾಮಗಾರಿಯನ್ನು 15 ದಿನದೊಳಗೆ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಿರುತ್ತಾರೆ…. ಈ ಸಂದರ್ಭದಲ್ಲಿ ಕೀರ್ತನ್ ಪೂಜಾರಿ, ಅಬ್ದುಲ್ ಲತೀಫ್, ಅಬ್ದುಲ್ ಅಹದ್, ಅಜಯ್ ಪೂಜಾರಿ, ರಮೇಶ್ ಬಂಗೇರ, ರವೀಂದ್ರ ಆಚಾರ್ಯ, ಶೈಲೇಶ್ ಹೆಗ್ಡೆ ಉಪಸ್ಥಿತರಿದ್ದರು…
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now