
ಪುತ್ತೂರು: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಯವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಕ್ರಂಪಾಡಿ ಕಚೇರಿಗೆ ಜೂ.17 ರಂದು ಭೇಟಿ ನೀಡಿ ಆಶೀರ್ವದಿಸಿದರು.
ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀಗಳ ಪಾದಗಳಿಗೆ ನೀರೆರೆದು, ತುಳಸಿ ಮಾಲೆ ಸಮರ್ಪಣೆ ಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಕಾರ್ಯದರ್ಶಿ ರವಿ ರೈಮಠ, ಖಜಾಂಚಿ ಗಣೇಶ್ ಮಕರಂದ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಿವೃತ್ತ ಉಪನ್ಯಾಸಕ ಪಿಷ್ಣ ಕೃಷ್ಣ, ಬಾಲವಕೃಷ್ಣನ್, ನ್ಯಾಯ ಜಡಿಯಂ ನರಸಿಂಹ ಪ್ರಸಾದ್, ಅಶೋಕ್ ವಾಲ್ ಭಟ್, ಶ್ರೀರಾಜಕ್ವಾಲ್ ಪುತ್ತಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























