
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಜ.24 ಮತ್ತು 25 ರಂದು ನಡೆಯಲಿರುವ ಇತಿಹಾಸ ಪ್ರಸಿದ್ದ ಕೋಟಿ ಚೆನ್ನಯ ಜೋಡು ಕರೆ ಕಂಬಳ ಕಾರ್ಯಕ್ರಮದ ಯಶಸ್ಸಿಗಾಗಿ ಕಂಬಳ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಮಾತನಾಡಿ, 33 ವರ್ಷದ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆಯಲಿದೆ.ಈ ಬಾರಿಯ ಕಂಬಳ ಕೂಟವು ಅತ್ಯಂತ ಸಂಭ್ರಮ ಸಡಗರದಿಂದ ನಡೆಯುವಂತಾಗಬೇಕು ಇದಕ್ಕಾಗಿ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಹಗಲು ರಾತ್ರಿಯನ್ನದೆ ಕೆಲಸ ಕಾರ್ಯಗಳು ನಡೆಯಲಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. 35 ವರ್ಷಗಳ ಹಿಂದೆ ನಿಂತು ಹೋಗಿದ್ದ ಕಂಬಳ ದಿವಂಗತ ಜಯಂತ ಕುಮಾರ್ ರೈರವರ ನೇತೃತ್ವದಲ್ಲಿ ಪುನಾರಾರಂಭಗೊಂಡಿತು.ಶಕುಂತಲಾ ಶೆಟ್ಟಿ ಅವರು ಈ ಹಿಂದೆ ಬಿಜೆಪಿ ಶಾಸಕಿರಾಗಿದ್ದ ಸಂದರ್ಭದಲ್ಲಿ ನಮ್ಮ ಕೈ ಬಿಡಲಿಲ್ಲ. ಅವರು ಕಾಂಗ್ರೆಸ್ನಿಂದ ಶಾಸಕರಾದ ಸಂದರ್ಭದಲ್ಲಿ ಪುತ್ತೂರಿನ ಕಂಬಳದ ಯಶಸ್ವಿಗೆ ಕೈಜೋಡಿಸಿದವರು. ಅವರು ಮಾಜಿ ಶಾಸಕರಾದರೂ ಇಲ್ಲಿಯವರೆಗೆ ಕಂಬಳದ ಮೇಲೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now