
ಪ್ರೊ.(ಡಾ.)ನಿರ್ಮಲ ಕುಮಾರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಏ.ಮತ್ತು ಎಲ್.ಎಲ್ ಎಂ ವಿದ್ಯಾಬ್ಯಾಸ ಮುಗಿಸಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನ ಪ್ರಾರಂಭಿಸಿದ್ದರು. ಕಾಲೇಜಿನಲ್ಲಿ ಶಿವಾಜಿ ಶೆಟ್ಟಿ ಅಣಕು ನ್ಯಾಯಾಲಯ ಸ್ಪರ್ಧೆಗಳನ್ನು 2007 ಮತ್ತು 2015 ರಿಂದ ಪ್ರತಿವರ್ಷವೂ ಸಂಯೋಜಕರಾಗಿ ನಿರ್ವಹಿಸಿದ್ದರು. ಪ್ರಾಂಶುಪಾಲರಾಗಿದ್ದಾಗ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಇಂಡಿಯಾ ಟುಡೆ ಪ್ರಕಾರ ಭಾರತದಲ್ಲೇ ಅತ್ಯಂತ ಕಡಿಮೆ ಶುಲ್ಕ ಪಡೆದು ಅತ್ಯುತ್ತಮ ವಿದ್ಯಾಭ್ಯಾಸ ಸಲ್ಲಿಸುವ ಕಾಲೇಜು ಎಂಬ ಶೀರ್ಷಿಕೆಯಡಿಯಲ್ಲಿನ ಸರ್ವೆಯಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ನಂತರದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಪ್ರಸ್ತುತ ಕಾಂಚೀಪುರಂ ನ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯದ ಕಾನೂನು ಡೀನ್ ಆಗಿ ನೇಮಕಗೊಂಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now