ಉಚಿತ ಆರೋಗ್ಯ ತಪಾಸಣಾ ಶಿಬಿರ – ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.)

ಉಚಿತ ಆರೋಗ್ಯ ತಪಾಸಣಾ ಶಿಬಿರ – ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.)

0Shares

ಉಡುಪಿ, ಗಾಯತ್ರಿ ಕಲ್ಯಾಣ ಮಂಟಪ ಕುಂಜಿಬೆಟ್ಟು ಇದರ ಅಮೃತ ಮಹೋತ್ಸವದ ಪ್ರಯುಕ್ತ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಕೆಎಂಸಿ ಮಣಿಪಾಲದ ತಜ್ನ ವೈದ್ಯರಿಂದ ಒಂದು ದಿನದ ಆರೋಗ್ಯ ತಪಾಸಣಾ ಶಿಬಿರವನ್ನು ಗಾಯತ್ರಿ ಕಲ್ಯಾಣ ಮಂಟಪ ಕುಂಜಿಬೆಟ್ಟು ಇಲ್ಲಿ ಹಮ್ಮಿಕೊಳ್ಳಲಾಯಿತು ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಇದರ ಸಹ ಪ್ರಾದ್ಯಾಪಕಿ ಡಾ ಈಶ್ವರಿ ಕೆ ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶ್ರೀ ವೆಂಕಟೇಶ್ ಆಚಾರ್ಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

ಡಾ ದಾಸ್ ಆಚಾರ್ಯ ನಿವೃತ್ತ ಪೆÇ್ರೀಫೆಸರ್ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ಸಾಮಾನ್ಯ ರಕ್ತ ಪರೀಕ್ಷೆ, ಕಣ್ಣೆನ ಪರೀಕ್ಷೆ, ದಂತ ಪರೀಕ್ಷೆ, ಹೃದಯ ಸಂಬಂಧಿ / ಇಸಿಜಿ, ಸ್ತನ ಮತ್ತು ಗರ್ಭಕೋಶ ಸಂಬಂದಿ ತಪಾಸಣೆ ನಡೆಸಲಾಯಿತು. ಶ್ರೀ ದಿವಾಕರ್ ವಿ ಆಚಾರ್ಯ, , ಶ್ರೀ ಹರೀಶ್ ಎಂ ಆಚಾರ್ಯ ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ 102 ಜನ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now