
ಮುಂಬಯಿ (ಆರ್ಬಿಐ), ಅ.೨೭: ಬಿಲ್ಲವ ಮಹಾಮಂಡಲದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಎನ್ಸಿಪಿ ಪಕ್ಷದ ಹಿರಿಯ ಉಪಾಧ್ಯಕ್ಷ ಲಕ್ಷ್ಮಣ ಸಿ. ಪೂಜಾರಿ ಅವರಿಗೆ ಅಭಿನಂದನೆಗಳನ್ನು ಶುಭಾರೈಸಿದರು.
ನಿಮ್ಮ ನಾಯಕತ್ವ, ಸಮರ್ಪಣೆ ಮತ್ತು ಸಮುದಾಯದ ಬಗೆಗಿನ ಬದ್ಧತೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅಖಂಧ ಬಿಲ್ಲವ ಸಮುದಾಯದ ಒಳಿತಿಗಾಗಿ ಈ ಜವಾಬ್ದಾರಿ ಸ್ಥಾನ ನಿಭಾಯಿಸುವಲ್ಲಿ ಯಶಸ್ವಿ ಆಗಲಿ ಮತ್ತು ನಿಮ್ಮ ಅವಿರತ ಶ್ರಮದ ಫಲ ಇದಾಗಿದೆ ಎಂದು ಲಕ್ಷ್ಮಣ್ ಪೂಜಾರಿ ಹಾರೈಸಿದರು.
ಈ ಸಂದರ್ಭದಲ್ಲಿ ಭಾರತ್ ಕೋ ಅಪರೇಟಿವ್ ಬ್ಯಾಂಕ್ (ಮುಂಬಯಿ)ಲಿಮಿಟೆಡ್ ಇದರ ನಿರ್ದೇಶಕ ಹಾಗೂ ನಿರಂಜನ್ ಎಲ್.ಪೂಜಾರಿ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now