
ನಮ್ಮ ಅಭಿಮಾನವಾಗಿದೆ. ಉದಾರತೆಯಿಂದ ಮಾತ್ರ ಸಂಸ್ಥೆಗಳ ಮುನ್ನಡೆ ಸಾಧವಾಗಿದ್ದು, ಭವಿಷ್ಯದಲ್ಲಿ ನಿಮ್ಮೆಲ್ಲರ ಸಹಕಾರ ಇನ್ನಷ್ಟು ದ್ವಿಗುಣ ಗೊಳ್ಳಲಿ. ಈ ಮೂಲಕ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತಷ್ಟು ಅಧಿಕಗೊಳಿಸೋಣ ಎಂದ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ವಾಸುದೇವ ಸಾಲಿಯಾನ್ ತಿಳಿಸಿದರು.
ಸಿಎ| ಸೋಮನಾಥ್ ಕುಂದರ್, ಮೋಹನ್ದಾಸ್ ಹೆಜ್ಮಾಡಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಗುರುವಂದನೆ ಸಲ್ಲಿಸಿ ಶುಭಾರೈಸಿ ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸದಸ್ಯರ ಮಕ್ಕಳು ನೃತ್ಯವೈಭವ ಪ್ರದರ್ಶಿಸಿದ್ದು ರಾಜ್ಕುಮಾರ್ ಕಾರ್ನಾಡ್ ಸಂಗೀತ ರಸಮಂಜರಿ ಸಾದರಪಡಿಸಿದರು. ಶಶಿಧರ್ ಬಂಗೇರಾ ಮಟ್ಟು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಗತ ಸಾಲಿನಲ್ಲಿ ನಿಧನರಾದ ಗಣ್ಯರಿಗೆ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಆನಂದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಗೈದರು. ಭಾಸ್ಕರ್ ಬಿ.ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಸಿಎ| ರೋಹಿತಾಕ್ಷ ದೇವಾಡಿಗ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿದ್ಯಾ ಶೆಣೈ ಮತ್ತು ಸರಿತಾ ರಾವ್ ಗುರುವಂದನಾ ಸ್ವೀಕೃತರನ್ನು ಪರಿಚಯಿಸಿದರು. ಲಕ್ಷ್ಮೀಶ್ ರಾವ್, ಶಶಿಧರ್ ಬಂಗೇರಾ ಸನ್ಮಾನಿತರನ್ನು ಪರಿಚಯಿಸಿದರು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ ದರು. ಶೇಖರ್ ಭಂಡಾರಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now