
ಮಂಗಳೂರು: ಸಾವು ಅನ್ನೋದು ಯಾವಾಗ ಹೇಗೆ ಬೇಕಾದರೂ ಬರಬಹುದು. ನಮ್ಮ ಬದುಕಿಗೆ ಯಾವುದೇ ಗ್ಯಾರಂಟಿಯಿಲ್ಲ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಮುಖ ಪ್ರತಿಭೆ, ಯುವ ವಕೀಲೆಯೋರ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಪ್ಪತ್ತ ನಾಲ್ಕು ವರ್ಷದ ರಾಜಶ್ರೀ ಜೆ.ಪೂಜಾರಿ ವಿಧಿವಶರಾದ ಯುವತಿ. ಬರಹಗಾರ್ತಿ, ಸಾಹಿತಿ, ನಿರೂಪಕಿಯಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಇವರ ನಿಧನಕ್ಕೆ ಆಪ್ತ ವಲಯ ಮೌನಕ್ಕೆ ಶರಣಾಗಿದೆ.
ಇವರ ಪ್ರತಿಭೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಬೆನ್ನಿಗೆ ಸಂಬಂಧಿಸಿದ್ದ ಖಾಯಿಲೆ ಇವರನ್ನು ಬಾಧಿಸಿದ್ದು ಚಿಕಿತ್ಸಾ ವೆಚ್ಚಕ್ಕೆ ದೇಣಿಗೆ ಸಂಗ್ರಹವನ್ನು ಕೂಡಾ ಮಾಡಲಾಗುತ್ತಿತ್ತು.ದುರಾದೃಷ್ಟವಶಾತ್ ಬಾಳಿ ಬದುಕಬೇಕಾಗಿದ್ದ ಜೀವ ವಿಧಿಯಾಟಕ್ಕೆ ಬಲಿಯಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























