
ಕೆಮ್ಮಣ್ಣು : ಗಾಂಧೀಜಿ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೆಮ್ಮಣ್ಣು ಇವರ ನೇತೃತ್ವದಲ್ಲಿ ತೋನ್ಸೆ ಗ್ರಾಮ ಪಂಚಾಯತ, ಸ್ವಚ್ಛ ಭಾರತ್ ಫ್ರೆಂಡ್ಸ, ಗಣಪತಿ ಸೇವಾ ಸಹಕಾರಿ ಸಂಘ ಕೆಮ್ಮಣ್ಣು, ಹಳೆ ವಿದ್ಯಾರ್ಥಿ ಸಂಘ, ತೋನ್ಸೆ ಹೆಲ್ತ್ ಸೆಂಟರ್ ಹೂಡೆ, ಕೆಮ್ಮಣ್ಣು ಕ್ರಿಕೆಟರ್ಸ್, ರೋಟರಿ ಕ್ಲಬ್ ಕಲ್ಯಾಣ್ಪುರ ಸೀನಿಯರ್ ಚೇಂಬರ ಇಂಟರ್ನ್ಯಾಷನಲ್, ನೇಜಾರು ಲಯನ್ಸ್ ಹಾಗೂ ಲಿಯೊ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಸಂತೆಕಟ್ಟೆ , ಲಯನ್ಸ್ ಕ್ಲಬ್ ಚೇತನ ಉಡುಪಿ, ಜೆಸಿಐ ಕಲ್ಯಾಣಪುರ , ಹಂಪನಕಟ್ಟೆ ಫ್ರೆಂಡ್ಸ್, ಕಂಡಾಳ ಫ್ರೆಂಡ್ಸ್
ಜಾಗ್ರತಿ ಜನ ಸೇವಾ ಸಂಸ್ಥೆ, ತೋನ್ಸೆ ಶ್ರೀ ದುರ್ಗಾ ಮ್ಯೂಸಿಕ್ ಮೀಟ್, ಮಂಚಿಮಣಿಪಾಲ ಇದರ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನೆರವೇರಿಸಲಾಯಿತು

ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಆನಂದ ಸಿ .ಕುಂದರ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಗಳಾದ ಸುಮತಿ ಕುಸುಮ ರವೀಂದ್ರ ಅಧ್ಯಕ್ಷರು ತೋನ್ಸೆ ಗ್ರಾಮ ಪಂಚಾಯತ್, ಹಾಗೂ ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ, ಅಥ್ಲೆಟಿಕ್ಸ್ ಕೋಚ್ ಉಡುಪಿ .ಸೀನಿಯರ್ ಚೇಂಬರ್ ನೇಜಾರು ಅಧ್ಯಕ್ಷರಾದ ಪರಿಸರ ಪ್ರೇಮಿ ನಿತ್ಯಾನಂದ ನೇಜಾರು ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























