
ಉಡುಪಿ ಅ.7: ಕಳೆದ 10 ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ರಾಘವ ಶೆಟ್ಟಿಯವರ ಸಂಬಂಧಿಕರು ಸಿಗದೇ ಇದ್ದು ಕೊನೆಗೂ ವಿಶು ಶೆಟ್ಟಿ ನೇತ್ರತ್ವದಲ್ಲಿ ಅಪರಿಚಿತ ಶವವಾಗಿ ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಚಿಕಿತ್ಸೆಯ ಸಮಯ ತನ್ನ ಹೆಸರು ರಾಘವ ಶೆಟ್ಟಿ ಎಂದು ರೋಗಿ ತಿಳಿಸಿದ್ದು ಹೆಚ್ಚಿನ ವಿವರ ತಿಳಿದು ಬಂದಿರಲಿಲ್ಲ. ಸಂಬಂಧಿಕರ ಪತ್ತೆಗಾಗಿ ಮಾಧ್ಯಮ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವರ ಪ್ರಕಟಿಸಲಾಗಿತ್ತು. ಇದೀಗ ಮೃತರ ದೇಹದ ವೈದ್ಯಕೀಯ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಕುಂದಾಪುರ ಠಾಣೆಯ ASI ಸುರೇಶ್ ಭಟ್ ಕಾನೂನು ಪ್ರಕ್ರಿಯೆ ನಡೆಸಿದರು. ಸಿಬ್ಬಂದಿ ಗೌತಮ್ ಹಾಗೂ ಲೈಫ್ ಗಾರ್ಡ್ ಅಂಬುಲೆನ್ಸ್ ಚಾಲಕ ರಾಘವೇಂದ್ರ ಸಹಕರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























