ಸಾಮಾಜಿಕ ಕಾರ್ಯಕರ್ತ, ಶಿಕ್ಷಕ ವಿ.ಕೆ. ಉದ್ಯಾವರ್ ಅವರು ನಿನ್ನೆ ರಾತ್ರಿ ಮಣಿಪಾಲದಲ್ಲಿ ಹೃದಯಾಘಾತದಿಂದ ನಿಧನ

ಸಾಮಾಜಿಕ ಕಾರ್ಯಕರ್ತ, ಶಿಕ್ಷಕ ವಿ.ಕೆ. ಉದ್ಯಾವರ್ ಅವರು ನಿನ್ನೆ ರಾತ್ರಿ ಮಣಿಪಾಲದಲ್ಲಿ ಹೃದಯಾಘಾತದಿಂದ ನಿಧನ

0Shares

ಕಟಪಾಡಿ: ಸಮಾಜ ಸಂಘಟಕ, ನಿವೃತ್ತ ಪ್ರೊ. ವಿ.ಕೆ. ಉದ್ಯಾವರ (66) ಹೃದಯಾಘಾತದಿಂದ ನಿಧನ ಹೊಂದಿದರು.

ಉಡುಪಿ ಬೋರ್ಡ್ ಹೈಸ್ಕೂಲ್, ಗ್ರೀನ್ ಪಾರ್ಕ್ ಕಾಲೇಜ್, ಕಾಪು ವಿದ್ಯಾನಿಕೇತನ, ತ್ರಿಷಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಆಡಳಿತಾಧಿಕಾರಿಯಾಗಿ, ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದರು.

ಮೂಲತಃ ಉದ್ಯಾವರ ಅಂಕುದ್ರು ನಿವಾಸಿ, ಪ್ರಸ್ತುತ ಮಣಿಪಾಲದಲ್ಲಿ ವಾಸ್ತವ್ಯ ಹೊಂದಿದ್ದರು.

ಉದ್ಯಾವರ ಯುವಕ ಮಂಡಲ, ಉದ್ಯಾವರ ಸಾರ್ವಜನಿಕ ಗಣೇಶೋತ್ಸವ ಸಹಿತ ಹತ್ತು ಹಲವು ಸಂಘಟನೆಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now