ಮೇ.03: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿ ವೃದ್ಧಿ ಸಂಘದ ಪ್ರಶಸ್ತಿ ಪ್ರದಾನ

ಮೇ.03: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿ ವೃದ್ಧಿ ಸಂಘದ ಪ್ರಶಸ್ತಿ ಪ್ರದಾನ

0Shares

ಮೇ.03: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಶಸ್ತಿ ಪ್ರದಾನ
ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಗಳ ಸ್ಮರಣಾರ್ಥ ಪ್ರಶಸ್ತಿಗೆ ಶ್ರೀನಿವಾಸ ಜೋಕಟ್ಟೆ
ಕೆ.ವಿ.ಆರ್ ಠಾಗೋರ್ ಸ್ಮರಣಾರ್ಥ ಪ್ರಶಸ್ತಿಗೆ ಡಾ| ಈಶ್ವರ ಅಲೆವೂರು ಮುಂಬಯಿ ಆಯ್ಕೆ

ಮುಂಬಯಿ (ಆರ್‌ಬಿಐ), ಎ. 21: ಕೇರಳ ರಾಜ್ಯದ ಕರ್ನಾಟಕ ಗಡಿನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಕಾರ್ಯಾಚರಿಸುತ್ತಾ ಸುಮಾರು ಎರಡು ದಶಕಗಳಲ್ಲಿ ಜನಮನ್ನಣೆಗೆ ಪಾತ್ರವಾದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು (ಕೆಡಿಕಜೆಡಿಎ) ಈ ಬಾರಿ ತನ್ನ ೨೦೨೫ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಕೊಡಮಾಡಲಿದ್ದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಸದಸ್ಯರಾಗಿರುವ ಬೃಹನ್ಮುಂಬಯಿಯಲ್ಲಿನ ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮತ್ತು ಅಕ್ಷಯ ಮಾಸಿಕದ ಮುಖ್ಯ ಸಂಪಾದಕ ಡಾ| ಈಶ್ವರ ಅಲೆವೂರು ಅವರನ್ನು ಆಯ್ಕೆ ಮಾಡಿದೆ ಎಂದು ಕೆಡಿಕಜೆಡಿಎ ಅಧ್ಯಕ್ಷ ರವಿ ನಾಯ್ಕಾಪು ತಿಳಿಸಿದ್ದಾರೆ.

ಬ್ರಹ್ಮೈಕ್ಯ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಗಳ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ಮುಂಬಯಿಯ ಹಿರಿಯ ಪತ್ರಕರ್ತ, ಗೋಕುಲವಾಣಿ ಮಾಸಿಕದ ಸಂಪಾದಕ ಶ್ರೀನಿವಾಸ ಜೋಕಟ್ಟೆ ಅವರಿಗೆ, ಮತ್ತು ಶ್ರೀಮತಿ ಭಾಗ್ಯ ಠಾಗೋರ್ ಪ್ರಾಯೋಜಕತ್ವದ ಸ್ವರ್ಗೀಯ ಕೆ.ವಿ.ಆರ್ ಠಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿಯನ್ನು ಅಕ್ಷಯ ಮಾಸಿಕದ ಮುಖ್ಯ ಸಂಪಾದಕ ಡಾ| ಈಶ್ವರ ಅಲೆವೂರು ಇವರನ್ನು ಆಯ್ಕೆ ಮಾಡಿದೆ ಎಂದು ಕೆಡಿಕಜೆಡಿಎ ಉಪಾಧ್ಯಕ್ಷ ಪುರುಷೋತ್ತಮ ಪೆರ್ಲಾ ತಿಳಿಸಿದ್ದಾರೆ.

ದತ್ತಿನಿಧಿ ಪ್ರಶಸ್ತಿಗಳು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಇತ್ಯಾದಿಗಳನ್ನು ಹೊಂದಿದ್ದು, ಇದೇ ಮೇ.03ರ ಶನಿವಾರ ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಅಲೈನ್ಸ್ ಸಭಾಂಗಣದಲ್ಲಿ ಕೆಡಿಕಜೆಡಿಎ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ ಶೆಟ್ಟಿ ಕುತ್ತಿಕಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಗುವ ದು. ಕರ್ನಾಟಕ ವಿಧಾನ ಪರಿಷತ್ತ್‌ನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರದಾನಿಸಲಿದ್ದಾರೆ ಎಂದು ಕೆಡಿಕಜೆಡಿಎ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕೆ. ಮತ್ತು ಕಾರ್ಯದರ್ಶಿ ಸ್ಟೆಫನ್ ಕ್ರಾಸ್ತ ತಿಳಿಸಿದ್ದಾರೆ.

ಶ್ರೀನಿವಾಸ ಜೋಕಟ್ಟೆ:

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗಡಿನಾಡ ಮಾಧ್ಯಮ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಬಹುಮಾನಗಳಿಗೆ ಭಾನಗರಾಗಿರುವ ಶ್ರೀನಿವಾಸ ಜೋಕಟ್ಟೆ ಅವರು ಹಿರಿಯ ಉಪ ಸಂಪಾದಕರು, ಮುಂಬಯಿಯ ಬಿಎಸ್‌ಕೆಬಿಎ ಇದರ ಮುಖವಾಣಿ ‘ಗೋಕುಲವಾಣಿ’ ಮಾಸಿಕದ ಸಂಪಾದಕರು.

ತೊಂಭತ್ತರ ದಶಕದಲ್ಲಿ ಕರ್ನಾಟಕದ ಪತ್ರಿಕೆಗಳಾ ದ ಲಂಕೇಶ್ ಪತ್ರಿಕೆ, ಶೂದ್ರ ಶ್ರೀನಿವಾಸರ ಸಲ್ಲಾಪ ವಾರಪತ್ರಿಕೆ, ಬೆಂಗಳೂರುನ ಪ್ರಿಯಾಂಕಾ ಮಾಸಿಕ, ಮಂಗಳೂರಿನ ಕರಾವಳಿ ಅಲೆ, ಕನ್ನಡ ಜನಾಂತರಂಗ ದೈನಿಕ ಮೊದಲಾದ ಪತ್ರಿಕೆಗಳಿಗೆ ಅವರು ಮುಂಬಯಿಯ ವರದಿಗಾರರಾಗಿದ್ದವರು. ಈ ತನಕ ೪೪ ಕೃತಿಗಳನ್ನು ಪ್ರಕಟಿಸಿರುತ್ತಾರೆ. ಇವರ ‘ಬಂಗ್ಲೆ ಮನೆಯ ಪ್ರಭು’ ಕತೆ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಕಾಂ ಪಠ್ಯದಲ್ಲಿ ಆಯ್ಕೆಯಾಗಿದೆ. ಇವರ ಗೋಳದ ಸುತ್ತ ಉಲ್ಕೆಗಳು ಕತೆಯು ತೆಲುಗು ಭಾಷೆಗೆ ಅನುವಾದ ಗೊಂಡಿದೆ.

ಡಾ| ಈಶ್ವರ ಅಲೆವೂರು:

ಅಕ್ಷಯ ಮಾಸಿಕದ ಮುಖ್ಯಸಂಪಾದಕ ಆಗಿರುವ ಡಾ| ಈಶ್ವರ ಅಲೆವೂರು ಅವರ ವಿಮರ್ಶಾ ಲೇಖನಗಳ ಕೃತಿ ‘ಒಲವು ನಿಲುವು’ ಪ್ರಕಟವಾಗಿದ್ದು ಜನಮೆಚ್ಚುಗೆ ಗಳಿಸಿದ್ದು ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅವರು ಗೌರವ ವರದಿಗಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಸುಮಾರು ಐದು ದಶಕಗಳಿಂದ ಅವರು ತಮ್ಮದೇ ಆದ ವಿಶಿಷ್ಟ ವರದಿಗಾರಿಕೆಯಿಂದ, ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳಿಂದ ಪ್ರಸಿದ್ದರಾಗಿದ್ದಾರೆ.

ಪ್ರಸಿದ್ಧ ಕಾದಂಬರಿಕಾರ ಸಾಹಿತಿ ವಿಶುಕುಮಾರ್ ಅವರ ಕಾದಂಬರಿಗಳ ಕುರಿತ ಸಂಶೋಧನಾ ಪ್ರಬಂಧಕ್ಕೆ ಮುಂಬಯಿ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿರುವರು. ಡಾ| ಅಲೆವೂರು ಅವರು ಹೃದಯವಂತರು ಪ್ರಶಸ್ತಿ, ಮೊಗವೀರ ಪತ್ರಿಕೆಯ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಸನ್ಮಾನಗಳಿಂದ ಗೌರವಿಸಲ್ಪಟ್ಟಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now