
ಕಾರವಾರ -ಕಾರವಾರ ಸಮೀಪ ನಡೆದ ದುರ್ಘಟನೆಯಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆದರ್ಶ ಪೂಜಾರಿ ದುರ್ಮರಣ ಕಂಡಿದ್ದಾರೆ. ಗೋವಾ ಪ್ರವಾಸ ಮುಗಿಸಿ ಕಾರವಾರಕ್ಕೆ ಮರಳುತ್ತಿದ್ದ ವೇಳೆ ಬೈಕ್ ಸ್ಲಿಪ್ ಆಗಿ ಅಪಘಾತ ಸಂಭವಿಸಿದೆ.
ಆದರ್ಶ ಪೂಜಾರಿ, ಕಾರವಾರದ ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಮಂಗಳವಾರ ರಾತ್ರಿ ತಮ್ಮ ಸಹಪಾಠಿ ರೌನಕ್ ಚಾವ್ಲಾ ಅವರೊಂದಿಗೆ ಗೋವಾಗೆ ತೆರಳಿದ ಅವರು, ಊಟ ಮುಗಿಸಿ ವಾಪಸ್ ಪ್ರಯಾಣಿಸುತ್ತಿದ್ದರು. ಈ ವೇಳೆ ಗೋವಾದ ಮಾಷೆಂ ಪ್ರದೇಶದಲ್ಲಿ ಅಕಸ್ಮಾತ್ ಎಮ್ಮೆ ರಸ್ತೆಗೆ ಬಂದಿದ್ದು, ಬೈಕು ಅದರೊಂದಿಗೆ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಯಿಂದ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿದೆ. ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ನಡೆದರೂ, ಆದರ್ಶ ಪೂಜಾರಿ ಅವರ ಪ್ರಾಣ ಉಳಿಯಲಿಲ್ಲ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now