ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಹಿರಿಯಡ್ಕ – ವಾರ್ಷಿಕ ಮಹಾಸಭೆ

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಹಿರಿಯಡ್ಕ – ವಾರ್ಷಿಕ ಮಹಾಸಭೆ

0Shares

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು, ಉಪಸಂಘ ಹಿರಿಯಡ್ಕ ತಾರೀಕು 31 – 08 – 2025 ರಂದು ಹಿರಿಯಡ್ಕ ಉಪಸಂಘದ 2024 – 25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಎಚ್ ರಾಜೇಂದ್ರ ಕುಮಾರ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಂದಿನ ಸಭೆಯಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷರು ಶ್ರೀ ಅಶೋಕ್ ಮೊಯ್ಲಿ, ಉಪಾಧ್ಯಕ್ಷರು ಶ್ರೀ ಕರುಣಾಕರ್ ಎಮ್ ಎಚ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೀಣಾ ಗಣೇಶ್, ಜೊತೆ ಕಾರ್ಯದರ್ಶಿ ಶ್ರೀ ರೋಹಿತಾಕ್ಷ ಮರೋಳಿ, ಕೋಶಾಧಿಕಾರಿ ಶ್ರೀಮತಿ ಗೀತಾ ಕಲ್ಯಾಣಪುರ ಇವರ ಉಪಸ್ಥಿತಿಯಲ್ಲಿ ನಡೆಯಿತು. ಶ್ರೀ ಅಶೋಕ್ ಮೊಯ್ಲಿ, ಶ್ರೀ ಕರುಣಾಕರ್ ಎಮ್ ಎಚ್, ಶ್ರೀ ರೋಹಿತಾಕ್ಷ ಮರೋಳಿ ಸಮಾಜದ ಬಗ್ಗೆ ಹಿತನುಡಿಗಳ್ಳನ್ನಾಡಿದರು.

ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ದೇವಾಡಿಗ ಸರ್ವರಿಗೂ ಸ್ವಾಗತಿಸಿ ಹಾಗೂ ಎಲ್ಲರ ಸಹಕಾರ ಕೋರಿದರು. ಸಂಘದ ಸದಸ್ಯರುಗಳು ಭಾಗವಹಿಸಿ ಸಲಹೆ ಸೂಚನೆಗಳನ್ನ ನೀಡಿದರು.
ಶ್ರೀ ರಮೇಶ್ ಸೇರಿಗಾರ್ ಕಾರ್ಯದರ್ಶಿ ವರದಿ ಒಪ್ಪಿಸಿ ಕೊನೆಯಲ್ಲಿ ಶ್ರೀಮತಿ ಆಶಾ ರಮೇಶ್ ಧನ್ಯವಾದವಿತ್ತರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now