

ಉಡುಪಿ, 17 ಮೇ 2025: ಹಾವಂಜೆ ಗ್ರಾಮ ಪಂಚಾಯತ್, ಹಾವಂಜೆ ಅರಿವು ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯ ಇದರ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಅಮೃತ ಸಭಾ ಭವನ ಹಾವಂಜೆಯಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ಡಿ ಪೂಜಾರಿಯವರು ಪರಿಸರ ರಕ್ಷಣೆಯ ಸಂಕೇತವಾಗಿ ಹೂವಿನ ಕುಂಡಕ್ಕೆ ನೀರೆರೆದರು. ಉಪಾಧ್ಯಕ್ಷರ ರಾದ ಗುರುರಾಜ್ ಕಾರ್ತಿಬೈಲು, ಕುಕ್ಕೆಹಳ್ಳಿ ಕ್ಲಸ್ಟರ್ ನ ಸಿ.ಆರ್.ಪಿ. ಶ್ರೀಮತಿ ಶಾಂತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೊಕ್ಕರ್ಣೆ, ಸದಸ್ಯರಾದ ಉದಯ ಕೋಟ್ಯಾನ್, ಕಾರ್ಯದರ್ಶಿ ವಿಮಲಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.

15 ದಿನಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸಂಘಸಂಸ್ಥೆ ಹಾಗೂ ಉದ್ಯಮಗಳ ಬೇಟಿ, ಯಕ್ಷಗಾನ, ಚಿತ್ರಕಲೆ, ಕಟ್ಟು ಕಟ್ಟು ಕಥೆ ಕಟ್ಟು, ಸಭಾ ಕಂಪನ & ಭಾಷಣ ಕಲೆ, ವಿಜ್ಞಾನ ಮಾಡೆಲ್ ತಯಾರಿ, ಪಕ್ಷಿ ವೀಕ್ಷಣೆ, ಯೋಗ ತರಬೇತಿ, ಔಷದೀಯ ಸಸ್ಯಗಳ ಗುರುತಿಸುವಿಕೆ ಹಾಗೂ ಬೆಳೆಯುವುದು, ನರ್ಸರಿ ಬೇಟಿ ಮಾಡಿ ಗಿಡಮೂಲಿಕೆ, ಕಸಿಕಟ್ಟುವಿಕೆ ವಿಧಾನ ಹಾಗೂ ವಿವಿಧ ಪ್ರಜಾತಿಯ ಹಣ್ಣು ಹಂಪಲು ಗಿಡಗಳ ಪರಿಚಯ, ಪ್ರಾಚೀನ ಸೂರಾಲು ಅರಮನೆ ವೀಕ್ಷಣೆ, ಗೋಶಾಲೆ ವೀಕ್ಷಣೆ ಹೀಗೆ ಹತ್ತು ಹಲವು ಶಿಕ್ಷಣದ ಜೊತೆಗೆ ಜೀವನ ಕೌಶಲ್ಯ ಬೆಳೆಸುವ ನಾವಿಣ್ಯ ರೀತಿಯ ಬೇಸಿಗೆ ಶಿಬಿರ ಆಯೋಜಿಸಲಾಯಿತು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿವರಾಮ ಕಾರಂತರ ಪಟ್ಟ ಶಿಷ್ಯ ಯಕ್ಷಗುರು ಪ್ರದೀಶ್ ಕುಮಾರ್ ಬ್ರಹ್ಮಾವರ, ಬೈರಂಪಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮುರುಳಿ, ಮಣಿಪಾಲ್ ಬರ್ಡ್ಸ್ ಕ್ಲಬ್ ನ ತೇಜಸ್ವಿ ಆಚಾರ್ಯ, ಸಿ.ಎಚ್ ಓ. ಆತ್ಮಿಕಾ, ಸದಾಶಿವ ಕೊಳಲಗಿರಿ, ವಿ.ಆರ್ ಶ್ರೇಯ, ಮನ್ವಿತಾ ಮುಂತಾದವರು ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಮನೋರಂಜನೆಯ ಜೊತೆಗೆ ಜೀವನ ಮೌಲ್ಯ ಕಲಿಸಿದರು. ಸಿ.ಎಂ.ಸಿ.ಎ. ಮತ್ತು ಅರ್ಲಿ ಬರ್ಡ್ಸ್ ನ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಯಿತು.



ಕಾರ್ಯಕ್ರಮದಲ್ಲಿ ಕುಕ್ಕೆಹಳ್ಳಿ ಹೈಸ್ಕೂಲ್ ಶಿಕ್ಷಕರಾದ ಪ್ರಕಾಶ್ ರಾವ್, ಪ್ರಾಥಮಿಕ ಆರೋಗ್ಯ ಅಧಿಕಾರಿ ಆಶಲತಾ, ಸಮುದಾಯ ಆರೋಗ್ಯ ಅಧಿಕಾರಿ ಆತ್ಮಿಕಾ, ಶಾಲಾ ಗೌರವ ಶಿಕ್ಷಕಿಯವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿ ಪೋಷಕರು, 45 ಗ್ರಾಮೀಣ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸುಮತಿಯವರು ಶಿಬಿರದ ಸಂಯೋಜನೆ ಮಾಡಿದ್ದರು, ವಿದ್ಯಾರ್ಥಿ ಗಹನ್ ಬಾರ್ಕೂರ್ ರವರು 15 ದಿನದ ಶಿಬಿರದ ಕಾರ್ಯಚಟುವಟಿಕೆಗಳ ಕಿರುಚಿತ್ರ ರಚಿಸಿ ಪ್ರಸ್ತುತಪಡಿಸಿದರು, ಶಿಬಿರಾರ್ಥಿ ಕು. ಪ್ರಣೀತ ಸ್ವಾಗತಿಸಿದರು ಪಂಚಾಯತ್ ಸಿಬ್ಬಂದಿ ಸದಾಶಿವ ಕಾರ್ಯಕ್ರಮ ನಿರೂಪಣೆ ಮಾಡಿ ವಂದನಾರ್ಪಣೆ ಗೈದರು.








Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























